ಕಾಪು, ಫೆ. 17 : ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಉಡುಪಿ ಜಿಲ್ಲೆ ವತಿಯಿಂದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಉದ್ಯಮಶೀಲತಾ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯಡಿ ಮಂಜೂರಾದ ಗೂಡ್ಸ್ ವಾಹನ ಹಾಗೂ ಆರ್ಥಿಕ ಸಹಾಯಧನವನ್ನು ಮಂಗಳವಾರ (ಫೆ.17) ಕಾಪು ಶಾಸಕರ ಕಚೇರಿಯಲ್ಲಿ ಫಲಾನುಭವಿಗಳಿಗೆ ವಿತರಿಸಲಾಯಿತು.
ಸ್ವಾವಲಂಬಿ ಸಾರಥಿ ಯೋಜನೆಯಡಿ ಪಲಿಮಾರು ಗ್ರಾಮದ ದಿನೇಶ್, ಕೊರಂಗ್ರಪಾಡಿ ಗ್ರಾಮದ ಅಭಿಲಾಶ್ ಹಾಗೂ ಅಲೆವೂರು ಗ್ರಾಮದ ದುರಗಪ್ಪ ಸೇರಿದಂತೆ ಮೂವರಿಗೆ ಗೂಡ್ಸ್ ವಾಹನ ಹಸ್ತಾಂತರಿಸಲಾಯಿತು. ಇದೇ ವೇಳೆ ಉದ್ಯಮಶೀಲತಾ ಯೋಜನೆಯಡಿ ಪಡುಬಿದ್ರಿ ಗ್ರಾಮದ ಹರೀಶ್, ಬೊಮ್ಮರಬೆಟ್ಟು ಗ್ರಾಮದ ಮಂಜುನಾಥ್ ಟಿ.ಎಲ್ ಹಾಗೂ ಪಲಿಮಾರು ಗ್ರಾಮದ ಸೌಮ್ಯ ಸೇರಿದಂತೆ ಮೂವರಿಗೆ ಆರ್ಥಿಕ ಸಹಾಯಧನದ ಆದೇಶ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸೌಮಲತಾ ಶೆಟ್ಟಿ, ಮಾಜಿ ಉಪಾಧ್ಯಕ್ಷ ರಾಯೇಶ್ ಪೈ, ಬೈರಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜೀಯಾನಂದ ಹೆಗಡೆ, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮೋಹನ್ ಸುವರ್ಣ, ಅಲೆವೂರು ಹಾಗೂ ಬೆಳ್ಳಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹರ್ಷಿತ್ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಂಕರ್ ಉಪಸ್ಥಿತರಿದ್ದರು.







