ಕಾರ್ಕಳ, ಫೆ. 17:ಮುಂಬೈ ಸಾಕಿನಾಕಾ ನಿವಾಸಿ ಹಾಗೂ ಕಾಂತಾವರದ ಅಂಬೆಟ್ಟು ಮೂಲದ ವಿದ್ಯಾ ಶೆಟ್ಟಿ ಅವರು ಪ್ರಾಮಾಣಿಕತೆಗೆ ಮತ್ತೊಂದು ನಿದರ್ಶನ ನೀಡಿದ್ದಾರೆ. ಫೆಬ್ರವರಿ 13ರಂದು ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನಾಭರಣಗಳಿಂದ ತುಂಬಿದ ಪರ್ಸ್ ಅವರ ಗಮನಕ್ಕೆ ಬಂದಿದೆ.ತ
ಕ್ಷಣವೇ ಜಾಗೃತಿಯಿಂದ ಕಾರ್ಯನಿರ್ವಹಿಸಿದ ವಿದ್ಯಾ ಶೆಟ್ಟಿ ಅವರು ಪರ್ಸ್ನ ವಾರಸುದಾರರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಹಸ್ತಾಂತರಿಸಿದರು. ಪರ್ಸ್ ಕಳೆದುಕೊಂಡವರು ಕುರ್ಕಾಲು ಮೂಲದ ಚಂದ್ರಕಲಾ ಎಂದು ತಿಳಿದುಬಂದಿದೆ.
ಸಾರ್ವಜನಿಕರು ಹಬ್ಬ–ಹರಿದಿನಗಳು ಹಾಗೂ ಸಂಭ್ರಮದ ಸಂದರ್ಭಗಳಲ್ಲಿ ರೈಲು ಮತ್ತು ಬಸ್ಗಳಲ್ಲಿ ಪ್ರಯಾಣಿಸುವಾಗ ಅಮೂಲ್ಯ ವಸ್ತುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.







