ಪ್ರಯಾಗರಾಜ್: ಫೆಬ್ರವರಿ 15: ಮಹಾಶಿವರಾತ್ರಿಯ ಅಂಗವಾಗಿ ತ್ರಿವೇಣಿ ಸಂಗಮ್ ಘಾಟ್ಗಳಲ್ಲಿ ಭಾನುವಾರ ಭಕ್ತರ ಅಪಾರ ಸಮಾಗಮ ಕಂಡುಬಂದಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪವಿತ್ರ ಸ್ನಾನದಲ್ಲಿ ಭಾಗವಹಿಸಿದ್ದಾರೆ.
ಮಾಘ ಮೇಳ 2026 ಹಿನ್ನೆಲೆಯಲ್ಲಿ ಭಕ್ತರು ಬೆಳಗ್ಗಿನಿಂದಲೇ ಸಂಗಮ್ ಘಾಟ್ಗಳಿಗೆ ಆಗಮಿಸಿ ಪವಿತ್ರ ಸ್ನಾನ ನೆರವೇರಿಸಿದರು. ಮಹಾಶಿವರಾತ್ರಿ ದಿನವು ಮಾಘ ಮೇಳದ ಕೊನೆಯ ‘ಸ್ನಾನ ಪರ್ವ’ವಾಗಿರುವುದರಿಂದ ಈ ಬಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಮಾಘ ಮೇಳ ಅಧಿಕಾರಿ ರಿಷಿ ರಾಜ್ ತಿಳಿಸಿದ್ದಾರೆ.
ಭಕ್ತರ ಸುರಕ್ಷತೆಗೆ ಉತ್ತರ ಪ್ರದೇಶ ಎಟಿಎಸ್ ಮೊಬೈಲ್ ಗಸ್ತು ದಳಗಳು ಮೇಳ ಪ್ರದೇಶದಲ್ಲಿ ನಿರಂತರ ಪೆಟ್ರೋಲಿಂಗ್ ನಡೆಸುತ್ತಿವೆ. ಆಡಳಿತವು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದ್ದು, ಸಿಸಿಟಿವಿ ನಿಗಾವಳಿ, ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಶಾಂತಿಯುತವಾಗಿ ಹಾಗೂ ಭಕ್ತಿಭಾವದಿಂದ ಮಹಾಶಿವರಾತ್ರಿ ಸ್ನಾನ ಪರ್ವ ನಡೆಯುತ್ತಿದ್ದು, ಭಕ್ತರು ಕ್ರಮಬದ್ಧವಾಗಿ ಸಂಗಮ್ನಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದರು.







