ಉಡುಪಿ : ಫೆಬ್ರವರಿ 15:ಉಡುಪಿ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಟ್ಟಿಬೆಟ್ಟು ಪ್ರದೇಶದ ಪರಿಶಿಷ್ಟ ಪಂಗಡ (ಕೊರಗ) ಸಮುದಾಯದವರಿಗೆ “ಆಸರೆ” ಯೋಜನೆಯಡಿ ನಿರ್ಮಿಸಲಾದ 8 ಸುಸಜ್ಜಿತ ಮನೆಗಳ ಗೃಹಪ್ರವೇಶ ಮತ್ತು ಹಸ್ತಾಂತರ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಕೋಟಿಗೀತಾ ಲೇಖನ ಯಜ್ಞದ ಗೀತಾ ಪುಸ್ತಕ ಹಾಗೂ ಬರವಣಿಗೆ ದೀಕ್ಷೆ ನೀಡಿದರು. ಜೊತೆಗೆ ಉಡುಪಿ ಶ್ರೀಕೃಷ್ಣರ ಭಾವಚಿತ್ರ ಹಾಗೂ ಅನುಗ್ರಹ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಇದೇ ವೇಳೆ ಕೊರಗ ಸಮುದಾಯದ ಅಭಿವೃದ್ಧಿಗಾಗಿ ಪೂಜ್ಯ ಶ್ರೀಪಾದರು ರೂ. 5 ಲಕ್ಷ ದಾನವಾಗಿ ಘೋಷಿಸಿ ಸಾಮಾಜಿಕ ಬದ್ಧತೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿಶೇಷವಾಗಿ ಖ್ಯಾತ ಚಲನಚಿತ್ರ ನಟ ರಿಷಬ್ ಶೆಟ್ಟಿ ಅವರೂ ಭಾಗವಹಿಸಿ ಕಾರ್ಯಕ್ರಮದ ಗೌರವ ಹೆಚ್ಚಿಸಿದರು.
“ಆಸರೆ” ಯೋಜನೆಯಡಿ ನಿರ್ಮಿಸಲಾದ ಈ ಮನೆಗಳು ಕೊರಗ ಸಮುದಾಯದವರ ಬದುಕಿನಲ್ಲಿ ಹೊಸ ಆಶಾಕಿರಣವಾಗಿವೆ.







