ಉಡುಪಿ:ಫೆಬ್ರವರಿ 10:ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್ ಹಿಂಪಡೆಯಲು ಹಾಗೂ ಕೇಂದ್ರ ಸರ್ಕಾರದ ಕಾಯ್ದೆ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿ ಮಾಡದಂತೆ ಆಗ್ರಹಿಸಿ ಫೆಬ್ರವರಿ 12 ರಂದು ಉಡುಪಿಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಬೆಳಿಗ್ಗೆ 9.30 ಗಂಟೆಗೆ ಬ್ರಹತ್ ಪ್ರತಿಭಟನೆ ನಡೆಯಲಿದೆ.
ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿರುವುದು ಬಂಡವಾಳಗಾರರಿಗೆ ಬ್ರಹತ್ ಲಾಭ ಮಾಡಿ ದುಡಿಯುವ ವರ್ಗದ ಜನರಿಗೆ ಮಾಡಿದ ಮಹಾಮೋಸ ಮಾಡುವಂತದ್ದಾಗಿದೆ ಅಲ್ಲದೇ ಕಾರ್ಪೋರೇಟ್ ಕಂಪೆನಿಗಳಲ್ಲಿ ಇತ್ತೀಚೆಗೆ ದುಡಿಯುತ್ತಿರುವ ಯುವಜನರಿಗೂ ಭವಿಷ್ಯದಲ್ಲಿ ಅಭದ್ರತೆ ಕಾಡಲಿದೆ.
ಕೇಂದ್ರ ಸರ್ಕಾರ ಖಾಸಗೀಕರಣ ಭಾಗವಾಗಿ ತಂದಿರುವ ವಿದ್ಯುತ್ ಕಾಯ್ದೆ -2025 ಅನುದಾನ ಕಡಿತ ಮಾಡಿ ಉದ್ಯೋಗ ಖಾತ್ರಿ ಯೋಜನೆಯನ್ನು ಹಳ್ಳ ಹಿಡಿಸುವ ಯೋಜನೆ ವಿರುದ್ಧ ಕಾರ್ಖಾನೆ ಕಾಯ್ದೆ ತಿದ್ದುಪಡಿ ವಿರುದ್ಧ,ಕಟ್ಟಡ ಕಾರ್ಮಿಕರ ಕಲ್ಯಾಣ ಕಾಯ್ದೆ ರದ್ದತಿ ವಿರುದ್ಧ, ಆಟೋರಿಕ್ಷಾ ಮತ್ತು ವಾಹನ ಚಾಲಕರ ಬೇಡಿಕೆಗಳಿಗಾಗಿ ಬೀಜ ಮಸೂದೆ ಕಾಯ್ದೆ ವಿರುದ್ಧ, ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣದ ವಿರುದ್ಧ ಸಾರ್ವತ್ರಿಕ ಮುಷ್ಕರ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಮುಖಂಡ ಕವಿರಾಜ್ ಎಸ್ ಕಾಂಚನ್ ತಿಳಿಸಿದ್ದಾರೆ.
ಫೆಬ್ರವರಿ 12 ರಂದು ಜಿಲ್ಲೆಯ ಕಟ್ಟಡ ಕಾರ್ಮಿಕರು,ಬೀಡಿ ಕಾರ್ಮಿಕರು, ಆಟೋ ರಿಕ್ಷಾ ಚಾಲಕರು, ಮೀನುಗಾರರು ಮೊದಲಾದ ದುಡಿಯುವ ವರ್ಗದ ಜನರು ಭಾಗವಹಿಸಲಿದ್ದಾರೆ ಎಂದು ಕವಿರಾಜ್ ಎಸ್ ಕಾಂಚನ್ಜೆ ಸಿಟಿಯು ಜಿಲ್ಲಾ ಸಂಚಾಲಕರು. ಕವಿರಾಜ್ ಎಸ್ ಕಾಂಚನ್ ಸಿಟಿಯು ಜಿಲ್ಲಾ ಸಂಚಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ







