ಕಾರ್ಕಳ ,ಫೆ. 06: ಫೆ. 5ರ ಸಂಜೆ ಅತ್ತೂರು ಚರ್ಚ್ ಬಳಿ ಬೆನ್ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರರಾದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರುದ್ರೇಶ್ ಹಾಗೂ ಹರೀಶ್ ಗಾಯಗೊಂಡಿದ್ದಾರೆ.
ದೂಪದಕಟ್ಟೆಯಿಂದ ಕಾರ್ಕಳ ಬರುತ್ತಿದ್ದ ಬೆಸ್ಟ್ ಕಾರಿಗೆ ಕಾರ್ಕಳದಿಂದ ದೂಪದಕಟ್ಟೆಯತ್ತ ಸಾಗುತ್ತಿದ್ದ ಬೈಕ್ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕ್ ರಸ್ತೆ ದಾಟಿ ಪೊದೆಗುರುಳಿದೆ. ಗಂಭೀರವಾಗಿ ಗಾಯಗೊಂಡಿರುವ ಸವಾರರಿಗೆ ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.







