ಮಹಾರಾಷ್ಟ್ರ,ಫೆ. 03 : ತಂದೆಯ ಯುಪಿಎಸ್ಸಿ ಕನಸನ್ನು ನನಸಾಗಿಸುವ ಸಂಕಲ್ಪದೊಂದಿಗೆ ಮಹಾರಾಷ್ಟ್ರದ ಔರಂಗಾಬಾದ್ನ ಮಾನ್ಸಿ ಸೋನಾವಾನೆ ತಮ್ಮ ವಿದ್ಯಾಭ್ಯಾಸದ ದಾರಿಯನ್ನು ಬದಲಿಸಿದರು. ನಾಸಿಕ್ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ಅವರು, ಔರಂಗಾಬಾದ್ನ ಸರ್ಕಾರಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದರು.
ಮಾನ್ಸಿಯ ತಂದೆ ಅಕೌಂಟೆಂಟ್. ಅವರು ಸ್ವತಃ ನಾಗರಿಕ ಸೇವೆಗಳಿಗೆ ಸೇರಲು ಬಯಸಿದ್ದರು. ಆದರೆ ಅವರು ಯಶಸ್ವಿಯಾಗಲಿಲ್ಲ. ಅವರ ಮಗಳು ಮಾನ್ಸಿ 12ನೇ ತರಗತಿಯ ನಂತರ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ನಲ್ಲಿ ತೇರ್ಗಡೆ ಹೊಂದಿ ಎಂಬಿಬಿಎಸ್ಗೆ ಪ್ರವೇಶ ಪಡೆಯುತ್ತಿದ್ದರು. ಆದರೆ ತನ್ನ ತಂದೆಯ ನನಸಾಗದ ಕನಸನ್ನು ನನಸಾಗಿಸಲು, ಆಕೆ ಎಂಬಿಬಿಎಸ್ ತೊರೆದು ಆರ್ಟ್ಸ್ಗೆ ಪ್ರವೇಶ ಪಡೆದು ಸಿವಿಲ್ ಸರ್ವಿಸಸ್ಗೆ ತಯಾರಿ ಆರಂಭಿಸಿದರು.
ಮಾನ್ಸಿ ಪದವಿ ಮುಗಿದ ಕೂಡಲೇ UPSC ಪರೀಕ್ಷೆಗೆ ಹಾಜರಾಗಿದ್ದರು. ಮೊದಲ ವರ್ಷದಲ್ಲಿ ಪರೀಕ್ಷೆಯನ್ನು ಅರ್ಥಮಾಡಿಕೊಂಡರು.ಆದರೆ ಎರಡು ಬಾರಿಯ ತನ್ನ ತಪ್ಪುಗಳಿಂದ ಪಾಠ ಕಲಿತು ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು.
UPSC 2021 ಬ್ಯಾಚ್ನಲ್ಲಿ 627 ನೇ ರ್ಯಾಂಕ್ ಗಳಿಸಿದ ಮಾನ್ಸಿ ಭಾರತೀಯ ರಕ್ಷಣಾ ಖಾತೆಗಳ ಸೇವೆಯಲ್ಲಿ ಡಿಫೆನ್ಸ್ ಅಕೌಂಟೆಂಟ್ ಆಗಿ ಆಯ್ಕೆಯಾದರು. ಗುರಿಯನ್ನು ಸಾಧಿಸಲು, ನಾವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯಬಾರದು ಮತ್ತು ವೈಫಲ್ಯದ ನಂತರವೂ ಬಿಡಬಾರದು, ಬದಲಿಗೆ ನಾವು ಪ್ರಯತ್ನಿಸುತ್ತಲೇ ಇರಬೇಕು, ಒಂದು ದಿನ ನಾವು ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತೇವೆ ಎಂದು ಮಾನ್ಸಿಯ ಕಥೆಯಿಂದ ಸ್ಪೂರ್ತಿಯಾಗಿದೆ






