Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home Accident

ಚಾರ್ಮಾಡಿ ಕಕ್ಕಿಂಜೆ ಬಳಿ ಕಾರು ಢಿಕ್ಕಿ: ಹೆದ್ದಾರಿ ಬದಿ ನಿಂತಿದ್ದ ಇಬ್ಬರಿಗೆ ಗಂಭೀರ ಗಾಯ…!!

Dhrishya News by Dhrishya News
02/02/2026
in Accident
0
ಚಾರ್ಮಾಡಿ ಕಕ್ಕಿಂಜೆ ಬಳಿ ಕಾರು ಢಿಕ್ಕಿ: ಹೆದ್ದಾರಿ ಬದಿ ನಿಂತಿದ್ದ ಇಬ್ಬರಿಗೆ ಗಂಭೀರ ಗಾಯ…!!
0
SHARES
1
VIEWS
Share on FacebookShare on Twitter

ಬೆಳ್ತಂಗಡಿ, ಫೆ. 02 : ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಪ್ರದೇಶದಲ್ಲಿ ರವಿವಾರ ಅಜಾಗರೂಕ ಚಾಲನೆಯಿಂದ ಕಾರೊಂದು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಕ್ಕಿಂಜೆ ನಿವಾಸಿಗಳಾದ ಉಮೇಶ (49) ಹಾಗೂ ಸೀನಪ್ಪ ಪೂಜಾರಿ (60) ಗಾಯಗೊಂಡವರಾಗಿದ್ದು, ಇಬ್ಬರೂ ಪರಸ್ಪರ ಸಂಬಂಧಿಕರು ಎಂದು ತಿಳಿದುಬಂದಿದೆ. ರವಿವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಕಕ್ಕಿಂಜೆ ಆಯಿಲ್ ಮಿಲ್ ಬಳಿ ಮನೆಗೆ ತೆರಳಲು ಆಟೋ ರಿಕ್ಷಾಕ್ಕೆ ಕಾಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಉಜಿರೆ ಕಡೆಯಿಂದ ಚಾರ್ಮಾಡಿ ದಿಕ್ಕಿನಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಹರ್ಷನ್ ಮನೋಜ್ ಅವರು ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆ ಅತೀ ಎಡಬದಿಗೆ ವಾಹನವನ್ನು ತಿರುಗಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಇಬ್ಬರು ಕೂಡ ಕಾರಿನ ಮುಂದಿನ ಗಾಜಿಗೆ ಬಿದ್ದು ಪಕ್ಕದ ಕಚ್ಚಾ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸೀನಪ್ಪ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶ್ ಅವರ ಎಡಕಾಲು, ತಲೆ, ಎಡಗೈಗೆ ಗುದ್ದಿದ ಗಾಯವಾಗಿದ್ದು, ಕಕ್ಕಿಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಮೇಶ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous Post

ಮನೆಯ ತುಳಸಿಯಿಂದಲೇ ಹೊಳೆಯುವ ಚರ್ಮ: ಮೊಡವೆಗಳಿಗೆ ನೈಸರ್ಗಿಕ ಪರಿಹಾರ…!

Next Post

ಕರಾವಳಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಕೇಂದ್ರ ಬಜೆಟ್: ಉದಯ ಶೆಟ್ಟಿ ಮುನಿಯಾಲು

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕರಾವಳಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಕೇಂದ್ರ ಬಜೆಟ್: ಉದಯ ಶೆಟ್ಟಿ ಮುನಿಯಾಲು

ಕರಾವಳಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಕೇಂದ್ರ ಬಜೆಟ್: ಉದಯ ಶೆಟ್ಟಿ ಮುನಿಯಾಲು

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

02/02/2026
ರೈತರಿಗೆ ಸಿಹಿಸುದ್ದಿ: ಟ್ರ್ಯಾಕ್ಟರ್ ಖರೀದಿಗೆ ಶೇ.20ರಿಂದ 50ರಷ್ಟು ಸರ್ಕಾರಿ ಸಬ್ಸಿಡಿ…!

ರೈತರಿಗೆ ಸಿಹಿಸುದ್ದಿ: ಟ್ರ್ಯಾಕ್ಟರ್ ಖರೀದಿಗೆ ಶೇ.20ರಿಂದ 50ರಷ್ಟು ಸರ್ಕಾರಿ ಸಬ್ಸಿಡಿ…!

02/02/2026
ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

02/02/2026
ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!

ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!

02/02/2026

Recent News

ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

02/02/2026
ರೈತರಿಗೆ ಸಿಹಿಸುದ್ದಿ: ಟ್ರ್ಯಾಕ್ಟರ್ ಖರೀದಿಗೆ ಶೇ.20ರಿಂದ 50ರಷ್ಟು ಸರ್ಕಾರಿ ಸಬ್ಸಿಡಿ…!

ರೈತರಿಗೆ ಸಿಹಿಸುದ್ದಿ: ಟ್ರ್ಯಾಕ್ಟರ್ ಖರೀದಿಗೆ ಶೇ.20ರಿಂದ 50ರಷ್ಟು ಸರ್ಕಾರಿ ಸಬ್ಸಿಡಿ…!

02/02/2026
ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

02/02/2026
ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!

ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!

02/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved