ಕಾರ್ಕಳ: ಶ್ರೀ ಮಯೂರವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸೂಡ ಇದರ ದಶಮ ವರ್ಷದ ತಿರುಗಾಟದ ಪ್ರಯುಕ್ತ, ಕಾರ್ಕಳದ ಶ್ರೀ ಮಹಮ್ಮಾಯಿ ಮುಖ್ಯಪ್ರಾಣ ದೇವಸ್ಥಾನ ಮಾರಿಗುಡಿಯಲ್ಲಿ ತುಳು ಯಕ್ಷಗಾನ ಬಯಲಾಟ ‘ಗುಂಡದ ಗುಳಿಗೆ’ ಅತ್ಯಂತ ಭಕ್ತಿಭಾವ ಮತ್ತು ಕಲಾತ್ಮಕ ವೈಭವದೊಂದಿಗೆ ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿಗಳೂ ಯಕ್ಷ ಕಲಾರಂಗದ ಅಧ್ಯಕ್ಷರಾದ ಶ್ರೀ ವಿಜಯಶೆಟ್ಟಿ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು C.A. ಶ್ರೀ ಕಮಲಾಕ್ಷ ಕಾಮತ್ ಅವರು ಉದ್ಘಾಟಿಸಿದರು.
ನಾಟಕ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಪ್ರತಿಭೆ ತೋರಿದ ಶ್ರೀ ರಾಜೇಶ್ ಕೆಂಚಂಗಿರಿ ಇವರಿಗೆ ಶ್ರೀ ಭಾಸ್ಕರ್ ಕುಲಾಲ್, ಶ್ರೀ ಮಾರಿಯಮ್ಮ ಫ್ಲವರ್ ಸ್ಟಾಲ್ ಕಾರ್ಕಳ ಇವರಿಂದ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಗೋಪಾಲ ಕೃಷ್ಣ ಶೆಟ್ಟಿ, ನಿವೃತ್ತ ಪುರಸಭಾಧಿಕಾರಿ ಅವರು ಅಭಿನಂದನ ಭಾಷಣ ಮಾಡಿದರು. ನಿವೃತ್ತ ಬ್ಯಾಂಕ್ ಪ್ರಬಂಧಕರಾದ ಶ್ರೀ ಕೆ.ಎ. ಶೆಟ್ಟಿ ಅವರು ಶುಭಾಶಂಸನಾ ನುಡಿಗಳನ್ನು ಆಡಿದರು.
ವೇದಿಕೆಯಲ್ಲಿ ಕಾರ್ಕಳದ ವಕೀಲರಾದ ಶ್ರೀ ಸುನೀಲ್ ಕುಮಾರ್ ಶೆಟ್ಟಿ, ಹಿತ ಮೆಡಿಕಲ್ ಕಾರ್ಕಳದ ಡಾ. ರವಿರಾಜ್ ಶೆಟ್ಟಿ, ಅನಂತ ಶಯನ ಮಹಿಳಾ ಯಕ್ಷ ಕಲಾ ಮಂಡಳಿ ಕಾರ್ಕಳದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಸುನೀಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಸಂಗ ಕೃತೃ, ಭಾಗವತ ಹಾಗೂ ವೃತ್ತಿಯಲ್ಲಿ ಅಧ್ಯಾಪಕರಾಗಿರುವ ಮೇಳದ ಸಂಸ್ಥಾಪಕರಾದ ಶ್ರೀ ಹರೀಶ್ ಶೆಟ್ಟಿ ಸೂಡ ಅವರು ಸ್ವಾಗತ ಭಾಷಣ ಹಾಗೂ ಪ್ರಸ್ತಾವನೆ ಮಾಡಿ, ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರನ್ನು ಸ್ಮರಿಸಿ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶಾಲಿನಿ ಡಿ. ಆಳ್ವ ಅವರು ನಿಭಾಯಿಸಿದರು.
ವರದಿ ಅರುಣ್ ಭಟ್ ಕಾರ್ಕಳ





