ಮೂಡುಬಿದ್ರೆ: ಡಿಸೆಂಬರ್ 29: ಹೃದಯಾಘಾತದಿಂದ ಪುರೋಹಿತ ಸುಕುಮಾರ ಆಚಾರ್ಯ (42) ಕುತ್ಯಾರು ಇವರು ರವಿವಾರ ಬೆಳಗ್ಗೆ ಪಡುಕುತ್ಯಾರು ಸೂರ್ಯ ಚೈತನ್ಯ ಸ್ಕೂಲ್ ಬಳಿಯ ಅವರ ನಿವಾಸದಲ್ಲಿ ನಿಧನ ಹೊಂದಿದರು.
ಅಲಂಗಾರು ಶ್ರೀ ಅಯ್ಯಸ್ವಾಮೀಮಠದ ಪ್ರಮುಖರಾಗಿದ್ದ ದಿ.ರುದ್ರಯ್ಯ ಪುರೋಹಿತರ ಶಿಷ್ಯರಾಗಿ ಬಳಿಕ ವ್ಯವಸ್ಥಾಪಕ ಬಿ. ವಿಶ್ವನಾಥ ಆಚಾರ್ಯರ ಜತೆಗಿದ್ದು ವೈದಿಕರಾಗಿ ರೂಪುಗೊಂಡ ಸುಕುಮಾರ ಆಚಾರ್ಯರು ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ, ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಸೇರಿದಂತೆ ಅವರು ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ, ತಂತ್ರಿಯವರಾದ ಪುರೋಹಿತ ಎನ್. ಕೇಶವ ಆಚಾರ್ಯ ಸಹಿತ ವಿವಿಧ ಸಮಿತಿಗಳ ಪ್ರಮುಖರು, ಅಲಂಗಾರು ಶ್ರೀ ಅಯ್ಯ ಸ್ವಾಮೀ ಮಠದ ವ್ಯವಸ್ಥಾಪಕ ಬಿ. ವಿಶ್ಚನಾಥ ಆಚಾರ್ಯ, ಮಠದ ಜೀರ್ಣೋದ್ಧಾರ ಸಮಿತಿ, ಮೂಡುಬಿದಿರೆಯ ವೈದಿಕ ಸಂರಕ್ಷಣಾ ಸಭಾದ ಸದಸ್ಯರು, ಸುಕುಮಾರ ಆಚಾರ್ಯರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇವರು ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅವರು ಅಗಲಿದ್ದಾರೆ.






