Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಅಖಿಲ ಭಾರತ ಮಹಿಳಾ ಟೇಬಲ್ ಟೆನ್ನಿಸ್ ಪಂದ್ಯಾವಳಿ: ವೀಕ್ಷಕರಾಗಿ ಮಾಹೆಯ ಡಾ. ಉಪೇಂದ್ರ ನಾಯಕ್ ನೇಮಕ..!!

Dhrishya News by Dhrishya News
18/12/2025
in ಸುದ್ದಿಗಳು
0
ಅಖಿಲ ಭಾರತ ಮಹಿಳಾ ಟೇಬಲ್ ಟೆನ್ನಿಸ್ ಪಂದ್ಯಾವಳಿ: ವೀಕ್ಷಕರಾಗಿ ಮಾಹೆಯ ಡಾ. ಉಪೇಂದ್ರ ನಾಯಕ್ ನೇಮಕ..!!
0
SHARES
6
VIEWS
Share on FacebookShare on Twitter

ಮಣಿಪಾಲ,: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು ಹಾಗೂ ಕ್ರೀಡಾ ಮಂಡಳಿಯ ಪ್ರಧಾನ ಸಂಯೋಜಕರಾದ ಡಾ. ಉಪೇಂದ್ರ ನಾಯಕ್ ಅವರನ್ನು ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟವು (ಎಐಯು) ‘ಅಖಿಲ ಭಾರತ ವಲಯ ಮಟ್ಟದ ಅಂತರ-ವಿಶ್ವವಿದ್ಯಾಲಯಗಳ ಮಹಿಳಾ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ಗೆ (ಪಶ್ಚಿಮ ವಲಯ) ವೀಕ್ಷಕರನ್ನಾಗಿ ನೇಮಿಸಿದೆ.

ಈ ಪಂದ್ಯಾವಳಿಯು ಡಿಸೆಂಬರ್ 16 ರಿಂದ 19 ರವರೆಗೆ ಸೂರತ್‌ನ ‘ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯ’ದಲ್ಲಿ ನಡೆಯಲಿದೆ. ಎಐಯು ವೀಕ್ಷಕರಾಗಿ ಡಾ. ನಾಯಕ್ ಅವರು ಪಂದ್ಯಾವಳಿಯ ನಿರ್ವಹಣೆ, ಕ್ರೀಡಾ ನಿಯಮಗಳ ಪಾಲನೆ ಹಾಗೂ ಆಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಪಂದ್ಯಾವಳಿಯ ವೇಳೆ ಯಾವುದೇ ತಾಂತ್ರಿಕ ಗೊಂದಲಗಳು ಉಂಟಾದಲ್ಲಿ ಮೇಲ್ಮನವಿ ಸಮಿತಿಯೊಂದಿಗೆ ಚರ್ಚಿಸಿ ಬಗೆಹರಿಸುವ ಜವಾಬ್ದಾರಿಯನ್ನು ಅವರು ವಹಿಸಲಿದ್ದಾರೆ.

ಕ್ರೀಡಾ ಪಂದ್ಯಾವಳಿಗಳಲ್ಲಿ ಪಾರದರ್ಶಕತೆ ಮತ್ತು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಎಐಯು ತಟಸ್ಥ ವೀಕ್ಷಕರನ್ನು ನೇಮಿಸುತ್ತದೆ. ಕ್ರೀಡಾ ಕ್ಷೇತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ಡಾ. ನಾಯಕ್ ಅವರು ಹೊಂದಿರುವ ಅಪಾರ ಅನುಭವವನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ. ಪಂದ್ಯಾವಳಿ ಮುಗಿದ 21 ದಿನಗಳ ಒಳಗಾಗಿ ಅವರು ಆಡಳಿತಾತ್ಮಕ ಮತ್ತು ತಾಂತ್ರಿಕ ಅಂಶಗಳನ್ನೊಳಗೊಂಡ ವರದಿಯನ್ನು ಎಐಯುಗೆ ಸಲ್ಲಿಸಲಿದ್ದಾರೆ.

ಕ್ರೀಡಾ ಆಡಳಿತದಲ್ಲಿ ಹಾಗೂ ಅಂತರ-ವಿಶ್ವವಿದ್ಯಾಲಯ ಕ್ರೀಡಾ ಸಂಸ್ಕೃತಿಯನ್ನು ದೇಶಾದ್ಯಂತ ಬೆಳೆಸುವಲ್ಲಿ ಮಾಹೆ ಹೊಂದಿರುವ ಬದ್ಧತೆಯನ್ನು ಈ ನೇಮಕಾತಿಯು ಎತ್ತಿ ತೋರಿಸುತ್ತದೆ. ಪಶ್ಚಿಮ ವಲಯದ ಪ್ರಮುಖ ವಿಶ್ವವಿದ್ಯಾಲಯಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು, ಮಹಿಳಾ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ರಮ ವೇದಿಕೆಯಾಗಲಿದೆ.

Previous Post

ಪ್ಯಾಲಿಯೇಟಿವ್‌ ಕೇರ್‌ಗೆ ಕೊಡುಗೆ ನೀಡಿದ ಹಳೆಯ ವಿದ್ಯಾರ್ಥಿ: ಮಾಹೆಯಲ್ಲಿ ಎಚ್‌ಬಿಎಸ್‌ಎಫ್ ನೂತನ ಚಿಕಿತ್ಸಾ ವಿಭಾಗ ಉದ್ಘಾಟನೆ..!!

Next Post

ಪ್ರತಿಷ್ಠಿತ ಅಲೆವೂರು ಗ್ರೂಪ್ ಆವಾರ್ಡ್‌ಗೆ ಮಾನಸಿ ಸುಧೀರ್ ಆಯ್ಕೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪ್ರತಿಷ್ಠಿತ ಅಲೆವೂರು ಗ್ರೂಪ್ ಆವಾರ್ಡ್‌ಗೆ  ಮಾನಸಿ ಸುಧೀರ್ ಆಯ್ಕೆ..!!

ಪ್ರತಿಷ್ಠಿತ ಅಲೆವೂರು ಗ್ರೂಪ್ ಆವಾರ್ಡ್‌ಗೆ ಮಾನಸಿ ಸುಧೀರ್ ಆಯ್ಕೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಬಡ ಮಧ್ಯಮ ವರ್ಗಕ್ಕೆ ಅನುಕೂಲ: ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 70 ಕೋಟಿ ಒಪಿಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭ-ದಿನೇಶ್ ಗುಂಡೂರಾವ್…!!

ಬಡ ಮಧ್ಯಮ ವರ್ಗಕ್ಕೆ ಅನುಕೂಲ: ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 70 ಕೋಟಿ ಒಪಿಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭ-ದಿನೇಶ್ ಗುಂಡೂರಾವ್…!!

29/01/2026
ಫೆಬ್ರವರಿ 3 ರಂದು  ಅಂತಾರಾಷ್ಟ್ರೀಯ ರಂಗ ಹಬ್ಬದಲ್ಲಿ ತುಳು ನಾಟಕ ‘ದೇವಿಮಹಾತ್ಮೆ’  ಪ್ರದರ್ಶನ..!!

ಫೆಬ್ರವರಿ 3 ರಂದು ಅಂತಾರಾಷ್ಟ್ರೀಯ ರಂಗ ಹಬ್ಬದಲ್ಲಿ ತುಳು ನಾಟಕ ‘ದೇವಿಮಹಾತ್ಮೆ’ ಪ್ರದರ್ಶನ..!!

29/01/2026
ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ ನವ ನರಸಿಂಹ ವಜ್ರ ಕವಚದ ಭಕ್ತಾರ್ಪಣೆ…!

ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ ನವ ನರಸಿಂಹ ವಜ್ರ ಕವಚದ ಭಕ್ತಾರ್ಪಣೆ…!

29/01/2026

Recent News

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಬಡ ಮಧ್ಯಮ ವರ್ಗಕ್ಕೆ ಅನುಕೂಲ: ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 70 ಕೋಟಿ ಒಪಿಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭ-ದಿನೇಶ್ ಗುಂಡೂರಾವ್…!!

ಬಡ ಮಧ್ಯಮ ವರ್ಗಕ್ಕೆ ಅನುಕೂಲ: ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 70 ಕೋಟಿ ಒಪಿಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭ-ದಿನೇಶ್ ಗುಂಡೂರಾವ್…!!

29/01/2026
ಫೆಬ್ರವರಿ 3 ರಂದು  ಅಂತಾರಾಷ್ಟ್ರೀಯ ರಂಗ ಹಬ್ಬದಲ್ಲಿ ತುಳು ನಾಟಕ ‘ದೇವಿಮಹಾತ್ಮೆ’  ಪ್ರದರ್ಶನ..!!

ಫೆಬ್ರವರಿ 3 ರಂದು ಅಂತಾರಾಷ್ಟ್ರೀಯ ರಂಗ ಹಬ್ಬದಲ್ಲಿ ತುಳು ನಾಟಕ ‘ದೇವಿಮಹಾತ್ಮೆ’ ಪ್ರದರ್ಶನ..!!

29/01/2026
ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ ನವ ನರಸಿಂಹ ವಜ್ರ ಕವಚದ ಭಕ್ತಾರ್ಪಣೆ…!

ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ ನವ ನರಸಿಂಹ ವಜ್ರ ಕವಚದ ಭಕ್ತಾರ್ಪಣೆ…!

29/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved