Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಉಡುಪಿ: ಆಟೋ ರಿಕ್ಷಾ ಮತ್ತುಸ್ಟ್ಯಾಂಡ್‌ಗಳಿಗೆ ಸಂಬಂಧ ಹೊಸ ನಡವಳಿ ಜಾರಿ – ರಿಕ್ಷಾ ಚಾಲಕರು ಪಾಲಿಸಲೇ ಬೇಕಾದ ನಿಯಮ ಗಳು ಇಲ್ಲಿದೆ

Dhrishya News by Dhrishya News
03/10/2025
in ಸುದ್ದಿಗಳು
0
0
SHARES
86
VIEWS
Share on FacebookShare on Twitter

ಉಡುಪಿ : ಅಕ್ಟೋಬರ್ 03:ಆಟೋ ರಿಕ್ಷಾ ಮತ್ತುಸ್ಟ್ಯಾಂಡ್‌ಗಳಿಗೆ ಸಂಬಂಧ ಹೊಸ ನಡವಳಿ ಜಾರಿಯಾಗಿದ್ದು ರಿಕ್ಷಾ ಚಾಲಕರು ಪಾಲಿಸಲೇಬೇಕಾದ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ

ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಆಟೋ ರಿಕ್ಷಾ ಮತ್ತು ಆಟೋ ರಿಕ್ಷಾ ಸ್ಟ್ಯಾಂಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಡವಳಿಗಳನ್ನು ಮಂಡಿಸಲಾಗಿದೆ.

ಉಡುಪಿ ನಗರದಲ್ಲಿ ಅಟೋ ರಿಕ್ಷಾ ವಾಹನಗಳಿಗೆ ವಲಯ 1 ಹಾಗೂ ವಲಯ 2 ಎಂದು ವರ್ಗಿಕರಿಸಲಾಗಿದೆ. ವಲಯ 1 ರಲ್ಲಿರುವ ಅಟೋ ರಿಕ್ಷಾಗಳು ಉಡುಪಿ ನಗರದ ವ್ಯಾಪ್ತಿಯೊಳಗೆ ಮಾತ್ರ ಸಂಚರಿಸಬೇಕು. ಆದರೆ ಯಾವ ಸ್ಟ್ಯಾಂಡ್‌ಗಳಲ್ಲಿ ಯಾವ ಆಟೋ ನಿಲ್ಲಿಸಬೇಕು ಎಂಬುದರ ಬಗ್ಗೆ, ಆಟೋ ರಿಕ್ಷಾ ಚಾಲಕರುಗಳ ಮಧ್ಯೆಯೇ ವಿವಾದ ಉಂಟಾಗಿ ದಿನ ನಿತ್ಯ ಅವರವರೇ ಗಲಾಟೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಈಗಾಗಲೇ 5 ಪ್ರಕರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ಉಡುಪಿ ನಗರದಲ್ಲಿ ಈಗಾಗಲೇ ಒಟ್ಟು 41 ಅಧಿಕೃತ ಅಟೋ ರಿಕ್ಷಾ ಸ್ಟ್ಯಾಂಡ್‌ಗಳನ್ನು ಗುರುತಿಸಲಾಗಿದೆ. ಇದಲ್ಲದೇ 17 ಅನಧಿಕೃತ ಸ್ಟ್ಯಾಂಡ್‌ ಗಳಿವೆ. ಸದ್ಯ ಆಗುತ್ತಿರುವ ತೊಂದರೆಗಳನ್ನು ಬಗೆಹರಿಸಲು ಎಲ್ಲಾ ಆಟೋ ಸ್ಟ್ಯಾಂಡ್‌ಗಳಲ್ಲಿ ನಿಲ್ಲುತ್ತಿರುವ/ ಚಾಲನೆ ಆಗುತ್ತಿರುವ ಆಟೋಗಳ ಸಂಖ್ಯೆ ಇತ್ಯಾದಿಗಳ ಬಗ್ಗೆ ವಿವರವಾದ ವರದಿಯನ್ನು ಪೊಲೀಸ್ ಅಧೀಕ್ಷಕರು ನೀಡಿದ್ದು, ವಿವರವಾಗಿ ಚರ್ಚಿಸಿ ಕೆಳಕಂಡಂತೆ ನಿರ್ಣಯಗಳನ್ನು ತೆಗೆದು ಕೊಂಡು, ಆಟೋ ರಿಕ್ಷಾ ಮತ್ತು ಆಟೋ ರಿಕ್ಷಾ ಸ್ಟ್ಯಾಂಡ್ ಗಳಲ್ಲಿ ಪಾಲಿಸಬೇಕಾದ ನೀತಿಯನ್ನು ಈ ಕೆಳಗಿನಂತೆ ಆದೇಶಿಸಿದೆ.

 

a) ಸದರಿ ನೀತಿ ನಗರಸಭೆ ಉಡುಪಿ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

 

b) ಸದ್ಯ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 58 (41 ಅಧಿಕೃತ ಹಾಗೂ 17 ಅನಧಿಕೃತ) ಸ್ಯಾಂಡ್‌ ಗಳನ್ನು ಗುರುತಿಸಿ ಅಧಿಕೃತ ಎಂದು ಘೋಷಿಸಿದೆ. (List in Appendix)

 

c) ಆಟೋ ಸ್ಯಾಂಡ್‌ಗಳು ನಗರಸಭಾ ಪ್ರದೇಶದ ವ್ಯಾಪ್ತಿಯ ಜಾಗದಲ್ಲಿ ಇರುವುದರಿಂದ, ಆಟೋಗಳನ್ನು ನಿಲ್ಲಿಸುವ ಬಗ್ಗೆ ಸ್ಯಾಂಡ್ ಪರ್ಮಿಟನ್ನು ಉಡುಪಿ ನಗರಸಭೆಯೇ ಹಂಚಿಕೆ ಮಾಡಬೇಕಾಗಿರುತ್ತದೆ.

 

d) ಆಟೋ ಚಾಲಕನ ಸೀಟ್‌ನ ಹಿಂಬದಿಯಲ್ಲಿ ಚಾಲಕನ ಹೆಸರು, ಆಟೋ ಸ್ಟ್ಯಾಂಡ್‌ ಹೆಸರು, ಆಟೋ ನೊಂದಣಿ ಸಂಖ್ಯೆ, ಮೊಬೈಲ್ ನಂಬ್ರ ಪ್ರಯಾಣಿಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶನ (Display) .

 

e) ಅಟೋರಿಕ್ಷಾದ ಹಿಂದುಗಡೆ ನಗರಸಭೆಯು ನೀಡಿದ ವಲಯ ಮತ್ತು ಸ್ಟ್ಯಾಂಡ್‌ನ ಹೆಸರನ್ನು ಕಾಣುವಂತೆ ನಮೂದಿಸಬೇಕು.

 

f) ಉಡುಪಿ ನಗರ ವ್ಯಾಪ್ತಿಯಲ್ಲಿ ವಲಯ 1 ಪರವಾನಿಗೆ ಇರುವ ರಿಕ್ಷಾಗಳಿಗೆ ಮಾತ್ರ ಅವಕಾಶ ಕೊಡುವುದು.

 

9) ಈಗಾಗಲೇ ಅಟೋ ಸ್ಟಾಂಡ್‌ಗಳನ್ನು ಬಳಸುತ್ತಿರುವ ರಿಕ್ಷಾ ಚಾಲಕರು ಆರ್.ಟಿ.ಓ ರವರಿಗೆ ಅರ್ಜಿ ಕೊಟ್ಟು, ಅಲ್ಲಿಂದ ಶಿಫಾರಸ್ಸು ಬಂದ ನಂತರ ಉಡುಪಿ ನಗರ ಸಭೆಯಿಂದ ತ್ವರಿತವಾಗಿ ಸ್ಯಾಂಡ್ ಪರ್ಮಿಟ್ ಪಡೆದುಕೊಳ್ಳುವುದು.

 

h) ಯಾವುದೇ ಅಟೋ ಸ್ಟ್ಯಾಂಡ್‌ ಗಳಲ್ಲಿ ಪ್ರಯಾಣಿಕರ ಜನದಟ್ಟಣೆ ಗಮನಿಸಿ, ಪರಿಶೀಲಿಸಿ ಅದರ ಆಧಾರದಲ್ಲಿ ಸ್ಟ್ಯಾಂಡ್ ಪರ್ಮಿಟ್ ಕೊಡುವುದು. ಇದರ ಬಗ್ಗೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯವರು ನಿರ್ಧಾರ ತೆಗೆದುಕೊಳ್ಳುವುದು.

 

i) ಹೊಸ ಸ್ಯಾಂಡ್ ಗುರುತಿಸುವ ಕುರಿತು ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯವರ ಜಂಟಿ ವರದಿ/ ಶಿಫಾರಸ್ಸಿನಂತೆ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯತಕ್ಕದ್ದು.

 

j) ಒಂದು ಅಟೋ ರಿಕ್ಷಾದವರಿಗೆ ಒಂದಕ್ಕಿಂತ ಹೆಚ್ಚು ಆಟೋ ಸ್ಟ್ಯಾಂಡ್ ಪರ್ಮಿಟ್ ನೀಡುವಂತಿಲ್ಲ.

 

k) ರಾತ್ರಿ 11-00 ಗಂಟೆಯಿಂದ ಬೆ 04-00 ಯವರೆಗೆ ವಲಯ 1 ರ ಯಾವುದೇ ಚಾಲಕರು, ವಲಯ 1 ರ ಯಾವುದೇ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಬಹುದು.

 

1) ಸದ್ಯ ಬಳಸುವ ರಿಕ್ಷಾಗಳಲ್ಲದೆ ಹೆಚ್ಚುವರಿ ಹೊಸದಾಗಿ ರಿಕ್ಷಾಗಳಿಗೆ ಸ್ಟ್ಯಾಂಡ್ ಪರ್ಮಿಟ್ ಕೊಡ ಬೇಕಾದರೆ ಸಾರಿಗೆ ಇಲಾಖೆಯವರು ಅರ್ಜಿ ಸ್ವೀಕರಿಸಿ Random ಆಗಿ ಲಾಟ್ ನಲ್ಲಿ ಚೀಟಿ ತೆಗೆದು ಸ್ಯಾಂಡ್ ಪರ್ಮಿಟ್ ನೀಡುವುದು.

 

m) ಸಾರಿಗೆ ಇಲಾಖೆಯ ಶಿಫಾರಸ್ಸು ಇಲ್ಲದೆ ಯಾವುದೇ ಸ್ಕ್ಯಾಂಡ್ ಪರ್ಮಿಟ್ ಅವಕಾಶ ಇರುವುದಿಲ್ಲ. ಸಾರಿಗೆ ಇಲಾಖೆಯವರ ಶಿಫಾರಸು ಮಾಡಿದ ನಂತರ ನಗರಸಭೆಯವರು ಕಡ್ಡಾಯವಾಗಿ ಪರ್ಮಿಟ್ ನೀಡಬೇಕು.

 

n) ಪ್ರತಿ ವರ್ಷ ಕಡ್ಡಾಯವಾಗಿ ವಾಹನದ ಅರ್ಹತಾ ಪತ್ರ, ವಾಹನದ ದಾಖಲಾತಿ, ಇನ್ನಿತರ ದಾಖಲಾತಿಗಳನ್ನು ನಗರಸಭೆಗೆ ಹಾಜರುಪಡಿಸಿ ಸ್ಯಾಂಡ್ ಪರ್ಮಿಟನ್ನು ನವೀಕರಣ ಮಾಡಿಸಿಕೊಳ್ಳುವುದು.

 

o) ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ರಿಕ್ಷಾ ಸ್ಟ್ಯಾಂಡ್‌ಗಳಲ್ಲಿ ಹೆಚ್ಚಿನ ಸದಸ್ಯರನ್ನು ಸೇರಿಸಿಕೊಳ್ಳಬೇಕಾದಲ್ಲಿ ಉಡುಪಿ ನಗರ ಸಭೆ ವ್ಯಾಪ್ತಿಯವರಿಗೆ ಮೊದಲ ಆದ್ಯತೆ ನೀಡುವುದು. ಈಗಾಗಲೇ ಆಟೋ ಸ್ಟ್ಯಾಂಡ್‌ನಲ್ಲಿ ವಲಯ -1 ಪರ್ಮಿಟ್ ಇರುವವರಿಗೆ ಅದೇ ಸ್ಟ್ಯಾಂಡ್‌ನಲ್ಲಿ ಸ್ಟ್ಯಾಂಡ್ ಪರ್ಮಿಟ್ ನೀಡುವುದು

p) ಸದ್ಯ ಇರುವ ವಲಯ 1ರಲ್ಲಿ ಇರುವ ಆಟೋ ಸ್ಟ್ಯಾಂಡ್‌ ಗಳನ್ನು ವಲಯ-2ನೇಯವರು ಬಳಸುತ್ತಿದ್ದಲ್ಲಿ ಎರಡು ತಿಂಗಳೊಳಗೆ ವಲಯ-1 ರ ಪರವಾನಿಗೆಯನ್ನಾಗಿ ಪರಿವರ್ತಿಸಿ ಕೊಳ್ಳುವುದು. ಎರಡು ತಿಂಗಳೊಳಗೆ ಪರವಾನಿಗೆಯನ್ನಾಗಿ ಪರಿವರ್ತಿಸಿಕೊಳ್ಳದೆ ಇದ್ದಲ್ಲಿ ಅಂತವರಿಗೆ ವಲಯ-1ರಲ್ಲಿನ ಸ್ಟ್ಯಾಂಡ್‌ಗಳನ್ನು ಬಳಸಲು ಅವಕಾಶ ಇರುವುದಿಲ್ಲ.

Previous Post

ರಾಜ್ಯ ವಿಧಾನ ಸಭೆಯ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್ ಬಿಜೆಪಿ ಜಿಲ್ಲಾ ಕಛೇರಿಗೆ ಬೇಟಿ, ಜಿಲ್ಲಾಧ್ಯಕ್ಷರಿಂದ ಗೌರವಾರ್ಪಣೆ..!!

Next Post

ಅಕ್ಟೋಬರ್ 10 ರಂದು ಉದ್ಯೋಗ ಮೇಳ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಅಕ್ಟೋಬರ್ 10 ರಂದು ಉದ್ಯೋಗ ಮೇಳ..!!

ಅಕ್ಟೋಬರ್ 10 ರಂದು ಉದ್ಯೋಗ ಮೇಳ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026

Recent News

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved