ಬೆಂಗಳೂರು: ಸೆಪ್ಟೆಂಬರ್ 01: ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲ್ಲೂಕಿನ 19 ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಸರ್ಕಾರ ಘೋಷಿಸಿದೆ. ಈ ನೀತಿಯಡಿ ಅಭಿವೃದ್ದಿಗೆ ಅನುದಾನ ಬಳಕೆಗೂ ಸೂಚಿಸಿದೆ.
ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯದ ಒಟ್ಟು 1275 ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದೆ.
ಹೀಗಿವೆ ಪ್ರವಾಸಿ ತಾಣಗಳಾಗಿ ಘೋಷಿಸಿದ ಸೊರಬದ ಸ್ಥಳಗಳು
ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನ
ಬಂಗಾರಧಾಮ
ಕೈತಭೇಶ್ವರ ಕೋಟಿಪುರ ದೇವಸ್ಥಾನ
ಗುಡವಿ ಪಕ್ಷಿಧಾಮ
ಹೀಗಿವೆ ಪ್ರವಾಸಿ ತಾಣಗಳಾಗಿ ಘೋಷಿಸಿದ ಸಾಗರ ತಾಲ್ಲೂಕಿನ ಸ್ಥಳಗಳು
ಜೋಗ ಜಲಪಾತ
ಸಿಗಂದೂರು ಚೌಡೇಶ್ವರಿ ದೇವಸ್ಥಾನ
ವರದಹಳ್ಳಿ ಶ್ರೀ ಶೀಧರ ಸ್ವಾಮಿ ಆಶ್ರಮ
ಬಳೆ ಪದ್ಮಾವತಿ ದೇವಸ್ಥಾನ ವಡಂಬೈಲು
ಇಕ್ಕೇರಿ ಅಘೋರೇಶ್ವರ ದೇವಸ್ಥಾನ
ಕಾನೂರು ಕೋಟೆ
ಹೊನ್ನೆಮರಡು ಜಲಕ್ರೀಡೆ
ದ್ವಿಮುಖ ಚಾಮುಂಡೇಶ್ವರಿ ದೇವಸ್ಥಾನ
ಕೂಗಾರು ಭೀಮೇಶ್ವರ ದೇವಸ್ಥಾನ, ಸಾಗರ
ಶ್ರೀ ಉಮಾ ಮಹೇಶ್ವರ ದೇವಸ್ಥಾನ, ಹೊಸಗುಂದ
ವರದಾಮೂಲ, ವರದ ನದಿ ಜನ್ಮಸ್ಥಳ
ಲಿಂಗನಮಕ್ಕಿ ಜಲಾಶಯ
ನಾಡಕಲಸಿ ನೀಲಕಂಠೇಶ್ವರ ದೇವಸ್ಥಾನ
ಹೆಗ್ಗೋಡು ನೀನಾಸಂ
ಕೆಳದಿ ರಾಮೇಶ್ವರ ದೇವಸ್ಥಾನ








