ಉಡುಪಿ :ಆಗಸ್ಟ್ 10 :ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮ್ಮೇಳನ ಇಂದು ಹಂಚು ಕಾರ್ಮಿಕರ ಭವನದಲ್ಲಿ ಜಿ.ಡಿ.ಪಂಜು ರವರ ಅಧ್ಯಕ್ಷತೆಯಲ್ಲಿ ನಡೆಯಿತು
ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾದ ಕಾಮ್ರೇಡ್ ಪುಟ್ಟುಮಾದು ಮಾಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತಾನಾಡುತ್ತಾ ಉದ್ಯೋಗ ಖಾತರಿ ಸಮಸ್ಯೆಗಳು, ನಿವೇಶನ ಸಮಸ್ಯೆಗಳ ಬಗ್ಗೆ ಎರಡು ಸರಕಾರಗಳ ಧೋರಣೆಯನ್ನು ವಿವರಿಸಿ ಹೇಳಿದರು
ಪಕ್ಕದ ರಾಜ್ಯವಾದ ಕೇರಳದಲ್ಲಿ ಕರ್ನಾಟಕ ಕ್ರಷಿಕೂಲಿಕಾರರಿಗೆ 60ವರ್ಷದ ನಂತರ 3000ಪಿಂಚಣಿ,ಮನೆ ಕಟ್ಟು 5ಸೆಂಟ್ಸ್ ಜಾಗ,ಹಾಗೂ ಕಲ್ಯಾಣ ಮಂಡಳಿ ಸವಲತ್ತುಗಳು ಸಿಗುತ್ತವೆ ಅದರೆ ಕರ್ನಾಟಕ ರಾಜ್ಯದಲ್ಲಿ ಯಾವುದು ಸಿಗುತ್ತಿಲ್ಲ.ಕೇಂದ್ರ ಸರಕಾರ ಪ್ರತಿವರ್ಷ ಬಜೆಟ್ ಅನುದಾನ ಕಡಿತಗೊಳಿಸಿ ಕೊಂಡು ಬರುತ್ತಿದೆ .ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಪಂಚಾಯತ್ ಮಟ್ಟದಲ್ಲಿ ಸಮಸ್ಯೆಗಳ ಬಗ್ಗೆ ಸರಕಾರ ಗಮನ ಹರಿಸಬೇಕು, ತಿಂಗಳಿಗೆ 600ರೂ ವೆತನ ಹಾಗೂ 200ದಿನ ಕೆಲಸ ನೀಡಬೇಕೆಂದು ಒತ್ತಾಯಿಸಿದರು. ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಕವಿರಾಜ್. ಎಸ್.ಕಾಂಚನ್,ಬೈಂದೂರು ತಾಲೂಕು ಅಧ್ಯಕ್ಷರಾದ ಪದ್ಮಾವತಿ ಶಿರೂರು,ಜನವಾದಿ ಮಹಿಳಾ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಉಪಸ್ಥಿತರಿದ್ದರು.
ಧ್ವಹರೋಹಣವನ್ನು ಸಂಘದ ಹಿರಿಯ ಸದಸ್ಯರಾದ ಕಮಲ ಬಸ್ರೂರು ನೆರವೇರಿಸಿದರು. ಹುತಾತ್ಮ ಸಂಗಾತಿಗಳಿಗೆ ಶ್ರದ್ಧಾಂಜಲಿ ಯನ್ನು ಶೋಭಾ ಮಂಡಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ನಾಗರತ್ನ ರಾಮನಗರ ಹಾಗೂ ಸ್ವಾಗತ ಮತ್ತು ಧನ್ಯವಾದವನ್ನು ನಾಗರತ್ನ ನಾಡ ಮಾಡಿದರು. ಮತ್ತು ಮುಂದಿನ 3 ವರ್ಷಗಳಿಗೆ 24 ಜನರ ಹೋಸ ಸಮಿತಿ ಆಯ್ಕೆ ಮಾಡಲಾಯಿತು.








