ಉಡುಪಿ:ಜೂನ್ 07 :ಮಣಿಪಾಲ, ಪರ್ಕಳ,ಪೆರಂಪಳ್ಳಿ ಪ್ರದೇಶದಲ್ಲಿ ಕೆಲ ತಿಂಗಳ ಹಿಂದೆ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಈಗ ಜೂನ್ 06 ರಂದು ಪರ್ಕಳ ಪ್ರದೇಶದಲ್ಲಿ ಪುನಃ ಚಿರತೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ
ಪರ್ಕಳದ ಬ್ರಹ್ಮ ಬೈದರ್ಕಳ ಗರೋಡಿ, ಹೆರ್ಗ ಸಂಪರ್ಕ ರಸ್ತೆಯ ಪ್ರದೇಶಕ್ಕೆ ಚಿರತೆ ಬಂದಿತ್ತು ಎಂದು ಸ್ಥಳೀಯರು ಹೇಳುತ್ತಿದ್ದು. ಇಲ್ಲಿನ ಒಂದು ಮನೆಯ ಕೋಳಿ ಹಾಗೂ ನಾಯಿಯನ್ನು ಹಗಲು ಹೊತ್ತಿನಲ್ಲಿಯೇ ಚಿರತೆ ಎಳೆದೊಯ್ದಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೂ ದೂರು ಬಂದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಿರತೆ ರಸ್ತೆ ದಾಟುತ್ತಿರುವುದನ್ನು ಸ್ಥಳೀಯರೊಬ್ಬರು ಕಂಡಿದ್ದಾರೆ ಎಂಬ ಮಾಹಿತಿ ಬಂದಿದೆ. ವಸತಿ ಪ್ರದೇಶಕ್ಕೆ ಚಿರತೆ ಹೋಗಿರುವ ಬಗ್ಗೆಯೂ ಯಾವುದೇ ಮಾಹಿತಿ ಅಥವಾ ಸಿಸಿಟಿವಿ ಕೆಮರಾಗಳಲ್ಲಿ ಸೆರೆಯಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.