Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ರಾಷ್ಟ್ರ ಮಟ್ಟದ IMC ರಾಮಕೃಷ್ಣ ಬಜಾಜ್ ಗುಣಮಟ್ಟ ಪ್ರಶಸ್ತಿ – 2024..!!

Dhrishya News by Dhrishya News
02/05/2025
in ಸುದ್ದಿಗಳು
0
ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ರಾಷ್ಟ್ರ ಮಟ್ಟದ IMC ರಾಮಕೃಷ್ಣ ಬಜಾಜ್ ಗುಣಮಟ್ಟ ಪ್ರಶಸ್ತಿ – 2024..!!
0
SHARES
2
VIEWS
Share on FacebookShare on Twitter

ಮುಂಬೈ, :– ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ (ಮಾಹೆ) ನ ಅಂಗಸಂಸ್ಥೆಯಯಾದ, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಪ್ರತಿಷ್ಠಿತ 2024ನೇ ಸಾಲಿನ IMC ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಕ್ವಾಲಿಟಿ ಅವಾರ್ಡ್ ಶಿಕ್ಷಣ ವಿಭಾಗದಲ್ಲಿ ಪಡೆದಿದೆ. ಭಾರತದ ಅತ್ಯಂತ ಗೌರವಾನ್ವಿತ ಹಾಗೂ ಗುಣಮಟ್ಟದ ಮೌಲ್ಯಮಾಪನದಲ್ಲಿ ಶ್ರೇಷ್ಠತೆ ತಲುಪಿದ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಪ್ರಶಸ್ತಿಗೆ ಭಾಜನವಾದ ಇನ್ನಿತರೆ ಸಂಸ್ಥೆಗಳಲ್ಲಿ, ಓಡಿಶಾದ ಹಿಂದಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್‌ನ ಘಟಕ ಆದಿತ್ಯ ಅಲ್ಯೂಮಿನಿಯಂ (ನಿರ್ಮಾಣ ವಿಭಾಗ) ಮತ್ತು ಚೆನ್ನೈಯ ಮೂಲದ ಲಾರ್ಸನ್ ಅಂಡ್ ಟೂಬ್ರೋ ಲಿಮಿಟೆಡ್ – ವಾಟರ್ ಅಂಡ್ ಎಫ್ಲೂಯೆಂಟ್ ಟ್ರೀಟ್‌ಮೆಂಟ್ ವಿಭಾಗ (ಸೇವಾ ವಿಭಾಗ) ಸೇರಿವೆ.

 

28ನೇ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪುರಸ್ಕಾರ ಮತ್ತು ಜುರಾನ್ ಪದಕ ಪ್ರದಾನ ಸಮಾರಂಭ ಬುಧವಾರ, ಏಪ್ರಿಲ್ 23 ರಂದು ಮುಂಬೈನ ಚರ್ಚ್‌ಗೇಟ್‌ನಲ್ಲಿ ಇರುವ ಇಎಂಸಿ ಚೇಂಬರ್ ಆಫ್ ಕಾಮರ್ಸ್‌ನ ವಾಲ್ಚಾಂದ್ ಹಿರಾಚಂದ್ ಸಭಾಂಗಣದಲ್ಲಿ ಸಂಜೆ 5.30 ಕ್ಕೆ ನಡೆಯಿತು. ಐಎಂಸಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ಶ್ರೀ ಸಂಜಯ ಮರಿವಾಲಾ ಅಧ್ಯಕ್ಷತೆ ವಹಿಸಿದ್ದರು. ಐಎಂಸಿ ಆರ್‌ಬಿಎನ್‌ಕ್ಯೂ ಅವಾರ್ಡ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ನಿರಜ್ ಬಜಾಜ್ ಮತ್ತು ನಿರ್ವಹಣಾ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎಂಐಟಿ ಸಂಸ್ಥೆಯ ನಿರ್ದೇಶಕರಾದ ಕಮಾಂಡರ್ ಡಾ. ಅನಿಲ್ ರಾಣಾ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ಅವರೊಂದಿಗೆ ಡಾ. ದಶರಥ್‌ರಾಜ್ ಕೆ. ಶೆಟ್ಟಿ, ಸಹ ಪ್ರಾಧ್ಯಾಪಕ, ಎಂಐಟಿ, ಮಾಹೆ ಉಪಸ್ಥಿತರಿದ್ದರು.

ಮಾಹೆ ಸಂಸ್ಥೆಯು 2024ನೇ ವರ್ಷವನ್ನು “ಉದ್ಯಮ ಹಾಗೂ ಅಕಾಡಮಿಕ್ ಸಹಭಾಗಿತ್ವ” ಎಂದು ಘೋಷಿಸಿರುವ ಸಂದರ್ಭದಲ್ಲಿ ಈ ಪ್ರಶಸ್ತಿ ದೊರೆತಿರುವುದು ವೈಶಿಷ್ಟ್ಯಪೂರ್ಣವೆನಿಸಿದೆ. ಅಮೆರಿಕದ ಮಾಲ್ಕಮ್ ಬಾಲ್ಡ್ರಿಡ್ಜ್ ಮಾದರಿಯ ಆಧಾರದ ಮೇಲೆ ಈ ಮೌಲ್ಯಮಾಪನ ನಡೆಸಿ, ಇಎಂಸಿ ಸಂಸ್ಥೆ ಭಾರತದಲ್ಲಿ ಇದನ್ನು ನೀಡುತ್ತಿರುವುದು, ಶಿಕ್ಷಣ ಮತ್ತು ಉದ್ಯಮದ ನಡುವಿನ ಬಲವಾದ ಜೋಡಣೆಯನ್ನು ಪ್ರತಿಬಿಂಬಿಸುತ್ತದೆ. 

ಮಣಿಪಾಲ್ ತಾಂತ್ರಿಕ ಮಹಾವಿದ್ಯಾಲಯವು ಸಲ್ಲಿಸಿದ ತನ್ನ ಅಪ್ಲಿಕೇಶನ್ ಸಂಘಟನೆಯ ಪ್ರಕ್ರಿಯೆಗಳ ಸ್ಪಷ್ಟ ರೂಪರೇಖೆ, ಸಾಧಿಸಿರುವ ಫಲಿತಾಂಶಗಳ ಲೆಕ್ಕಾಚಾರ ಮತ್ತು ಸಂಸ್ಥೆಯು ಸಮಾಜದಲ್ಲಿ ಮೂಡಿಸಿದ ಪ್ರಭಾವದ ಸಂಪೂರ್ಣ ಚಿತ್ರಣವನ್ನು ಒಳಗೊಂಡಿತ್ತು.

ಮಾಹೆ ಅಧ್ಯಕ್ಷರು ಹಾಗೂ ಮಣಿಪಾಲ ಎಜುಕೇಶನ್ ಹಾಗೂ ಮೆಡಿಕಲ್ ಗ್ರೂಪಿನ ಅಧ್ಯಕ್ಷರೂ ಆದ ಡಾ| ರಂಜನ್ ಪೈ, ಮಾಹೆ ಸಹ ಕುಲಾಧಿಪತಿಗಳಾದ ಡಾ| ಎಚ್. ಎಸ್. ಬಲ್ಲಾಳ್, ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ|) ಎಂ.ಡಿ. ವೆಂಕಟೇಶ್, ಹಾಗೂ ಸಹ ಉಪ ಕುಲಪತಿಗಳಾದ ಡಾ| ನಾರಾಯಣ ಸಭಾಹಿತ್ ಅವರು ಎಂಐಟಿ ಸಂಸ್ಥೆಯ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ. ಸಂಸ್ಥೆಯ ನಿರ್ದೇಶಕ ಕಮಾಂಡರ್ ಡಾ| ಅನಿಲ್ ರಾಣಾ, ಬೋಧಕ ಸಿಬ್ಬಂದಿ, ಸಂಸ್ಥೆಯ ನಾಯಕತ್ವ ಹಾಗೂ ವಿದ್ಯಾರ್ಥಿಗಳ ಪ್ರಯತ್ನಶೀಲತೆ ಹಾಗೂ ಬದ್ಧತೆಯನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ.

ಎಂಐಟಿ ನಿರ್ದೇಶಕರಾದ ಕಮಾಂಡರ್ ಡಾ. ಅನಿಲ್ ರಾಣಾ ಅವರು ಪ್ರಶಸ್ತಿಯ ಕುರಿತು ಮಾತನಾಡುತ್ತಾ, “ಏಪ್ರಿಲ್ 23ರಂದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಎಂಐಟಿ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವ ಅವಕಾಶವು ನನಗೆ ಹೆಮ್ಮೆ ತಂದಿದೆ. ಕಳೆದ ಏಳು ದಶಕಗಳಿಂದ ಶಿಕ್ಷಣ, ಸಂಶೋಧನೆ, ಪರಿಸರ ಜವಾಬ್ದಾರಿ, ಸಮುದಾಯ ಸೇವೆ ಹಾಗೂ ಸುರಕ್ಷಿತ ಶೈಕ್ಷಣಿಕ ವಾತಾವರಣದ ನಿರ್ಮಾಣಕ್ಕೆ ಸಂಸ್ಥೆಯು ಬದ್ಧವಾಗಿದ್ದು ಭಾರತದೆಲ್ಲೆಡೆಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿರುವುದರಿಂದ` ಇದು ಒಕ್ಕೂಟದಂತೆ ಕಾರ್ಯನಿರ್ವಹಿಸುತ್ತಿರುವ ವಿದ್ಯಾಸಂಸ್ಥೆಯಾಗಿದೆ. ಈ ಸಾಧನೆಯ ಹಿಂದೆ ಇರುವ ಶ್ರೇಷ್ಟ ದೃಷ್ಟಿಕೋನವನ್ನು ಡಾ. ಟಿ.ಎಂ.ಎ. ಪೈ ಅವರು ರೂಪಿಸಿದ್ದು, ನಂತರ ಡಾ. ರಾಮದಾಸ್ ಪೈ ಮತ್ತು ಡಾ. ರಂಜನ್ ಪೈ ಅವರಿಂದ ಅದನ್ನು ಬೆಳೆಸಲಾಯಿತು. ರಚನಾತ್ಮಕತೆ, ಕುತೂಹಲ ಮತ್ತು ಉದ್ಯಮಶೀಲ ಮನೋಭಾವವಿರುವ ನಮ್ಮ ಸಂಸ್ಥೆಯ ನಂಬಿಕೆ ಈ ಪ್ರಶಸ್ತಿಯ ಮೂಲಕ ಮತ್ತಷ್ಟು ಬಲಗೊಳ್ಳುತ್ತದೆ,” ಎಂದು ಹೇಳಿದರು

Previous Post

ಡಾ. ಶಿರನ್ ಶೆಟ್ಟಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಎಂಡೋಸ್ಕೋಪಿ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ, ಕಸ್ತೂರ್ಬಾ ಆಸ್ಪತ್ರೆಯು ಯಕೃತ್ತು (ಲಿವರ್) ಕಸಿ ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ

Next Post

SSLC ಫಲಿತಾಂಶ:ದಕ್ಷಿಣ‌ ಕನ್ನಡ ಪ್ರಥಮ ಉಡುಪಿ ಗೆ 2ನೇ ಸ್ಥಾನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
SSLC ಫಲಿತಾಂಶ:ದಕ್ಷಿಣ‌ ಕನ್ನಡ ಪ್ರಥಮ ಉಡುಪಿ ಗೆ 2ನೇ ಸ್ಥಾನ..!!

SSLC ಫಲಿತಾಂಶ:ದಕ್ಷಿಣ‌ ಕನ್ನಡ ಪ್ರಥಮ ಉಡುಪಿ ಗೆ 2ನೇ ಸ್ಥಾನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಯುವಕನ ಬಂಧನ..!!

ಉಡುಪಿ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಯುವಕನ ಬಂಧನ..!!

27/07/2025
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ಜುಲೈ 30 ಮತ್ತು 31 ರಂದು ಉಚಿತ ಫಲವತ್ತತೆ ಮತ್ತು ಬಂಜೆತನ ತಪಾಸಣಾ ಶಿಬಿರದ ಆಯೋಜನೆ..!!

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ಜುಲೈ 30 ಮತ್ತು 31 ರಂದು ಉಚಿತ ಫಲವತ್ತತೆ ಮತ್ತು ಬಂಜೆತನ ತಪಾಸಣಾ ಶಿಬಿರದ ಆಯೋಜನೆ..!!

27/07/2025
ಮಂಗಳೂರು : ಬಹುಮುಖ ಪ್ರತಿಭೆ ಯುವ ವಕೀಲೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ..!!

ಮಂಗಳೂರು : ಬಹುಮುಖ ಪ್ರತಿಭೆ ಯುವ ವಕೀಲೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ..!!

26/07/2025
ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗರ ಪಂಚಮಿ ಆಚರಣೆ ..!!

ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗರ ಪಂಚಮಿ ಆಚರಣೆ ..!!

26/07/2025

Recent News

ಉಡುಪಿ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಯುವಕನ ಬಂಧನ..!!

ಉಡುಪಿ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಯುವಕನ ಬಂಧನ..!!

27/07/2025
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ಜುಲೈ 30 ಮತ್ತು 31 ರಂದು ಉಚಿತ ಫಲವತ್ತತೆ ಮತ್ತು ಬಂಜೆತನ ತಪಾಸಣಾ ಶಿಬಿರದ ಆಯೋಜನೆ..!!

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ಜುಲೈ 30 ಮತ್ತು 31 ರಂದು ಉಚಿತ ಫಲವತ್ತತೆ ಮತ್ತು ಬಂಜೆತನ ತಪಾಸಣಾ ಶಿಬಿರದ ಆಯೋಜನೆ..!!

27/07/2025
ಮಂಗಳೂರು : ಬಹುಮುಖ ಪ್ರತಿಭೆ ಯುವ ವಕೀಲೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ..!!

ಮಂಗಳೂರು : ಬಹುಮುಖ ಪ್ರತಿಭೆ ಯುವ ವಕೀಲೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ..!!

26/07/2025
ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗರ ಪಂಚಮಿ ಆಚರಣೆ ..!!

ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗರ ಪಂಚಮಿ ಆಚರಣೆ ..!!

26/07/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved