Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ನಾವೀನ್ಯತೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯನ್ನು ಉತ್ತೇಜಿಸಲು ಡ್ಯೂರ್ ಟೆಕ್ನಾಲಜೀಸ್‌ನೊಂದಿಗೆ ಮಾಹೆ ಪಾಲುದಾರಿಕೆ..!!

Dhrishya News by Dhrishya News
04/04/2025
in ಸುದ್ದಿಗಳು
0
0
SHARES
4
VIEWS
Share on FacebookShare on Twitter

ಮಣಿಪಾಲ, 3 ಏಪ್ರಿಲ್ 2025: ಮುಂದುವರಿದ ಸಂಶೋಧನೆ, ಶಿಕ್ಷಣ, ಆರೋಗ್ಯ ಆವಿಷ್ಕಾರ ಮತ್ತು ಪರಿವರ್ತನಾತ್ಮಕ ಪರಿಹಾರಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಡ್ಯೂರ್ ಟೆಕ್ನಾಲಜೀಸ್ ಪ್ರೈ.ಲಿ ಜೊತೆ ಕಾರ್ಯತಂತ್ರದ ಪಾಲುದಾರಿಕೆಯೊಂದಕ್ಕೆ ಬಂದಿದ್ದು, ಸಹಿ ಹಾಕಿದೆ.

ಈ ಕುರಿತ ಕಾರ್‍ಯಕ್ರಮದಲ್ಲಿ ಮಾಹೆಯ ಕಾರ್ಪೊರೆಟ್ ರಿಲೇಶನ್ ಕುರಿತ ನಿರ್ದೇಶಕ ಡಾ.ಹರೀಶ್ ಕುಮಾರ್, ಅವರು ಪ್ರತಿನಿಧಿಗಳನ್ನು ಸ್ವಾಗತಿಸಿದರು ಮತ್ತು ಈ ಒಪ್ಪಂದದ ಕುರಿತ ಅವಲೋಕನ ಒದಗಿಸಿದರು. ಜೊತೆಗೆ ಎರಡೂ ಸಂಸ್ಥೆಗಳ ಗುರಿಗಳನ್ನು ಹೇಳಿ ಬೆಳವಣಿಗೆ ಮತ್ತು ಪ್ರಭಾವಶಾಲಿ ಸಂಶೋಧನೆಗೆ ದೀರ್ಘಾವಧಿಯ ಸಾಮರ್ಥ್ಯವಿರಬೇಕೆಂದು ಅಭಿಪ್ರಾಯ ಪಟ್ಟರು.

ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಅವರು ಮಾತನಾಡಿ, ಶೈಕ್ಷಣಿಕ ಮತ್ತು ಆರೋಗ್ಯ ರಕ್ಷಣೆಯ ಆವಿಷ್ಕಾರವನ್ನು ಮುನ್ನಡೆಸುವಲ್ಲಿ ಅಂತಹ ಒಪ್ಪಂದಗಳು ಅಗತ್ಯ ಎಂದರು. ಈ ರೀತಿಯ ಸಹಯೋಗಗಳು ಸಂಶೋಧನೆ ಮತ್ತು ತಂತ್ರಜ್ಞಾನದ ಭವಿಷ್ಯವನ್ನು ಚಾಲನೆಗೊಳಿಸುತ್ತವೆ. ಈ ಪಾಲುದಾರಿಕೆಯು ಆರೋಗ್ಯ ರಕ್ಷಣೆಯಲ್ಲಿ ಮಾತ್ರವಲ್ಲದೆ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ಧಿಯಲ್ಲಿ ತರುವ ಪ್ರಗತಿಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು.

ಮಾಹೆಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ, ಡಾ. ರವಿರಾಜ ಎನ್. ಸೀತಾರಾಮ್ ಅವರು ಶ್ರೇಷ್ಠತೆಯ ದೃಷ್ಟಿಕೋನವನ್ನು ಹಂಚಿಕೊಂಡರು. ಇದು ಎರಡು ಘಟಕಗಳ ಒಟ್ಟುಗೂಡಿಸುವಿಕೆಯನ್ನು ಪ್ರತಿನಿಧಿಸುತ್ತದೆ. ಈ ಸಹಯೋಗವು ವಿದ್ಯಾರ್ಥಿಗಳಿಂದ ಹಿಡಿದು ಅಧ್ಯಾಪಕರವರೆಗೆ ವಿಶಾಲ ಸಮುದಾಯದ ಎಲ್ಲರಿಗೂ ಪ್ರಯೋಜನವನ್ನು ನೀಡಲಿದೆ ಎಂದು ಆಶಿಸಿದರು.

ಡ್ಯೂರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಸಿಇಒ ಶ್ರೀ ವಿಪಿನ್ ಯಾದವ್, ಅವರು ಮಾತನಾಡಿ, ಆರೋಗ್ಯ ಕ್ಷೇತ್ರದ ಪರಿವರ್ತನೆಯಲ್ಲಿ ಪರಿವರ್ತಿಸುವಲ್ಲಿ ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದರು. ಇಂದು ಆರೋಗ್ಯ ರಕ್ಷಣೆಯಲ್ಲಿನ ಕೆಲವು ಸವಾಲುಗಳನ್ನು ಪರಿಹರಿಸಲು ನಾವೀನ್ಯತೆ ಮುಖ್ಯ ಎಂಬುದನ್ನು ನಾವು ಡ್ಯೂರ್ ಟೆಕ್ನಾಲಜೀಸ್‌ನಲ್ಲಿ ನಂಬಿದ್ದೇವೆ. ಮಾಹೆಯೊಂದಿಗೆ ನಮ್ಮ ಪಾಲುದಾರಿಕೆ ಭವಿಷ್ಯದಲ್ಲಿ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲು ಅತ್ಯುತ್ತಮವಾದ ಶೈಕ್ಷಣಿಕ ಸಂಶೋಧನೆ ಮತ್ತು ತಾಂತ್ರಿಕ ಪರಿಣತಿಯನ್ನು ಒಟ್ಟುಗೂಡಿಸಲು ಸಾಧ್ಯವಾಗಲಿದೆ ಎಂದರು.

ಮಾಹೆ ರಿಜಿಸ್ಟ್ರಾರ್ ಡಾ ಗಿರಿಧರ್ ಪಿ. ಕಿಣಿ, ಅವರು ಮಾತನಾಡಿ, ಮಣಿಪಾಲವು ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅಪಾರ ಸಾಮರ್ಥ್ಯ ಹೊಂದಿದೆ. ಡ್ಯೂರ್ ಟೆಕ್ನಾಲಜೀಸ್ ಜೊತೆಗಿನ ಸಹಯೋಗವು ಮಾಹೆ ಇರಿಸಿಕೊಂಡಿರುವ ಆರೋಗ್ಯ ಆವಿಷ್ಕಾರ ಕುರಿತ ಭವಿಷ್ಯ ದೃಷ್ಟಿಕೋನಕ್ಕಾಗಿ ಒಂದು ಉತ್ತೇಜಕ ಕ್ಷಣವಾಗಿದೆ ಎಂದರು.

ಮಣಿಪಾಲದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ನಿರ್ದೇಶಕರಾದ ಡಾ. ಚೆರಿಯನ್ ವರ್ಗೀಸ್ ವಿ, ಅವರು ಮಾತನಾಡಿ, ಡ್ಯೂರ್ ಟೆಕ್ನಾಲಜೀಸ್ ಪ್ರೈ.ಲಿ. ಜೊತೆಗೆ ಒಪ್ಪಂದವು ಶೈಕ್ಷಣಿಕ ಉತ್ಕೃಷ್ಟತೆಗಾಗಿ ಮಾಹೆಗೆ ಪ್ರಮುಖವಾದ್ದಾಗಿದೆ. ಈ ಸಹಯೋಗವು ಮತ್ತಷ್ಟು ನಾವೀನ್ಯತೆಯತ್ತ ಒಂದು ಪ್ರೇರಣದಾಯಕ ಹೆಜ್ಜೆಯಾಗಿದೆ. ಜಂಟಿ ಸಂಶೋಧನಾ ಪ್ರಯತ್ನಗಳನ್ನು ಉತ್ತೇಜಿಸಲು, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊಸ ಎತ್ತರಕ್ಕೆ ಏರಿಸಲು ಮತ್ತು ಅತ್ಯಾಧುನಿಕ ತರಬೇತಿ ಉಪಕ್ರಮಗಳನ್ನು ಪರಿಚಯಿಸಲು ಈ ಒಪ್ಪಂದವನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

ಡಾ. ಗಣೇಶ್ ಪ್ರಸಾದ್ ಪಡುಬಿದ್ರಿ (ನಿರ್ದೇಶಕರು – ಐಟಿ ಮತ್ತು ಡಿಜಿಟಲ್ ರೂಪಾಂತರ, ಮಾಹೆ, ಮಣಿಪಾಲ), ಭರತ್ ಕುಮಾರ್ (ನಿರ್ದೇಶಕರು – ಪಿಆರ್, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ, ಮಾಹೆ, ಮಣಿಪಾಲ), ಡಾ. ಬ್ರ್ಯಾಲ್ ಕ್ಯಾರಿ ಡಿಸೋಜಾ (ಸಹ ಪ್ರಾಧ್ಯಾಪಕರು, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಮಣಿಪಾಲ), ಮತ್ತು ಶ್ರೀ. ಭುವನೇಶ್ವರನ್ ಟೆಕ್ನೋರ್ ಮಾನಿಪಾಲ್ ಪ್ರೈ. ಲಿ.) ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದರು.

Previous Post

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ :  ಓರ್ವ ಸಾವು, ಹತ್ತಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ..!!

Next Post

ಗಂಗೊಳ್ಳಿ :ಆಟೋರಿಕ್ಷಾ – ಕಾರಿನ ನಡುವೆ ಭೀಕರ ಅಪಘಾತ :ಆಟೋ ಚಾಲಕ ಗಂಭೀರ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಗಂಗೊಳ್ಳಿ :ಆಟೋರಿಕ್ಷಾ - ಕಾರಿನ ನಡುವೆ ಭೀಕರ ಅಪಘಾತ :ಆಟೋ ಚಾಲಕ ಗಂಭೀರ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಅಧಿವೇಶನ ಫೆಬ್ರವರಿ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಬಡ ಮಧ್ಯಮ ವರ್ಗಕ್ಕೆ ಅನುಕೂಲ: ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 70 ಕೋಟಿ ಒಪಿಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭ-ದಿನೇಶ್ ಗುಂಡೂರಾವ್…!!

ಬಡ ಮಧ್ಯಮ ವರ್ಗಕ್ಕೆ ಅನುಕೂಲ: ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 70 ಕೋಟಿ ಒಪಿಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭ-ದಿನೇಶ್ ಗುಂಡೂರಾವ್…!!

29/01/2026
ಫೆಬ್ರವರಿ 3 ರಂದು  ಅಂತಾರಾಷ್ಟ್ರೀಯ ರಂಗ ಹಬ್ಬದಲ್ಲಿ ತುಳು ನಾಟಕ ‘ದೇವಿಮಹಾತ್ಮೆ’  ಪ್ರದರ್ಶನ..!!

ಫೆಬ್ರವರಿ 3 ರಂದು ಅಂತಾರಾಷ್ಟ್ರೀಯ ರಂಗ ಹಬ್ಬದಲ್ಲಿ ತುಳು ನಾಟಕ ‘ದೇವಿಮಹಾತ್ಮೆ’ ಪ್ರದರ್ಶನ..!!

29/01/2026

Recent News

ಅಧಿವೇಶನ ಫೆಬ್ರವರಿ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಬಡ ಮಧ್ಯಮ ವರ್ಗಕ್ಕೆ ಅನುಕೂಲ: ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 70 ಕೋಟಿ ಒಪಿಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭ-ದಿನೇಶ್ ಗುಂಡೂರಾವ್…!!

ಬಡ ಮಧ್ಯಮ ವರ್ಗಕ್ಕೆ ಅನುಕೂಲ: ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 70 ಕೋಟಿ ಒಪಿಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭ-ದಿನೇಶ್ ಗುಂಡೂರಾವ್…!!

29/01/2026
ಫೆಬ್ರವರಿ 3 ರಂದು  ಅಂತಾರಾಷ್ಟ್ರೀಯ ರಂಗ ಹಬ್ಬದಲ್ಲಿ ತುಳು ನಾಟಕ ‘ದೇವಿಮಹಾತ್ಮೆ’  ಪ್ರದರ್ಶನ..!!

ಫೆಬ್ರವರಿ 3 ರಂದು ಅಂತಾರಾಷ್ಟ್ರೀಯ ರಂಗ ಹಬ್ಬದಲ್ಲಿ ತುಳು ನಾಟಕ ‘ದೇವಿಮಹಾತ್ಮೆ’ ಪ್ರದರ್ಶನ..!!

29/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved