ಉಡುಪಿ : ಮಾರ್ಚ್ 10:ಬೆಟಾಲಿಯನ್ ನಲ್ಲಿ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸಿರುವ, ಶ್ರೀಮತಿ ಸಂತುದೇವಿ ಇವರನ್ನು ಪೂಜ್ಯ ಪರ್ಯಾಯ ಶ್ರೀಪಾದರು ಶ್ರೀ ಕೃಷ್ಣಾನುಗ್ರಹರೂಪದಲ್ಲಿ ಪ್ರಸಾದವನ್ನು ನೀಡಿ ಅನುಗ್ರಹಿಸಿದರು.ಅಲ್ಲದೆ ಕೋಟಿ ಗೀತಾ ಲೇಖನ ದೀಕ್ಷೆಯನ್ನು ನೀಡಿದರು
ಹರಿಯಾಣದಲ್ಲಿ ಜನಿಸಿದ 1986ರಲ್ಲಿ ಕೇಂಧ್ರಿಯ ಮೀಸಲು ಪೋಲೀಸ್ ಪಡೆಯಲ್ಲಿ (CRPF) ಸೇರ್ಪಡೆಗೊಂಡಿದ್ದು ಲೇಡಿ ಸಿಂಗಮ್ ಎಂದು ಪ್ರಖ್ಯಾತಿಯನ್ನು ಪಡೆದ,39 ವರ್ಷಗಳ ಸೇವೆಯಲ್ಲಿ 2005ರ ಜುಲೈ 5ರಂದು ಅಯೋಧ್ಯೆಯಲ್ಲಿ ನಡೆದ ಆತಂಕವಾದಿಗಳ ಆಕ್ರಮಣದ ಸಂದರ್ಭದಲ್ಲಿ 5 ಮಂದಿ ಆತಂಕವಾದಿಗಳನ್ನು ಹೊಡೆದುರುಳಿಸಿ ಈ ಕಾರ್ಯಕ್ಕೆ ರಾಷ್ಟ್ರಪತಿಗಳಿಂದ PPMG(ಪ್ರೆಸಿಡೆಂಟ್ ಪೋಲೀಸ್ ಮೆಡಲ್ ಪಾರ್ ಗ್ಯಾಲೆಂಟರಿ) ಸೇನಾಪದಕ ಪಡೆದಿರುತ್ತಾರೆ
ಕಾಶ್ಮೀರದ ಲಾವೇಪುರದಲ್ಲಿ 2020ರ ಫೆಬ್ರವರಿ 6 ರಂದು ನಡೆದ ಆತಂಕವಾಧಿ ಕಾರ್ಯಾಚರಣೆಯಲ್ಲಿ ಮೂವರು ಆತಂಕವಾದಿಗಳನ್ನು ಹತ್ಯೆಗೈದು ಒಬ್ಬ ಆತಂಕವಾಧಿಯನ್ನು ಬಂಧಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿ,ಅದಕ್ಕಾಗಿ D. G. Disk ಪದಕವನ್ನು ಹಾಗೂ ಇನ್ನಿತರ ಸೇನಾ ಪದಕಗಳ ಗೌರವವನ್ನು ಪಡೆದಿರುವ ,ಭಾರತದ ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಗುಜರಾತ್, ಅಸ್ಸಾಂ, ಮಣಿಪುರ, ಮಧ್ಯಪ್ರದೇಶ ಮುಂತಾದೆಡೆ ಕಾರ್ಯ ನಿರ್ವಹಿಸಿರುತ್ತಾರೆ