ಕಾರ್ಕಳ :ಮಾರ್ಚ್ 01: ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಶಾಸಕರಾದ ಶ್ರೀ. ವಿ. ಸುನೀಲ್ ಕುಮಾರ್ ರವರು ಕಾರ್ಕಳ, ಕುಕ್ಕುಂದೂರು, ದುರ್ಗಾ, ಇರ್ವತ್ತೂರು, ಕಾಂತಾವರ, ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಫೆಬ್ರವರಿ 28ರಂದು ಸವಲತ್ತುಗಳನ್ನು ವಿತರಣೆ ಮಾಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 26 ಫಲಾನುಭವಿಗಳಿಗೆ 94C / 94CC ಯಡಿ ಹಕ್ಕುಪತ್ರ ವಿತರಣೆ ಮಾಡಲಾಯಿತು. ಕಾರ್ಮಿಕ ಇಲಾಖೆಯಿಂದ 30 ಫಲಾನುಭವಿಗಳಿಗೆ ವೆಲ್ಡರ್ ಕಿಟ್, ಟೆಲ್ಸ್ ಕಿಟ್, ಎಲೆಕ್ಟ್ರಿಷಿಯನ್ ಕಿಟ್ ಗಳನ್ನು ವಿತರಿಸಿದರು. ಕುಕ್ಕುಂದೂರು & ಕಾಂತಾವರ ಗ್ರಾಮ ಪಂಚಾಯತ್ 3 SC /ST ಫಲಾನುಭವಿಗಳಿಗೆ ಸಹಾಯಧನವನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸರಕಾರದ ವಿವಿಧ ಯೋಜನೆಯಡಿ ಸಿಗುವ ಸೌಲಭ್ಯವನ್ನು ಪಡೆದು ತಮ್ಮ ಕೆಲಸದಲ್ಲಿ ಈಗ ನೀಡುವ ಉಪಕರಣಗಳನ್ನು ಉಪಯೋಗಿಸಿಕೊಳ್ಳಬೇಕು. ಹಾಗೂ 94 C ಅಡಿ ಹಕ್ಕುಪತ್ರ ಪಡೆದವರು ಈ ಕ್ಷಣದಿಂದ ಜಾಗದ ಮಾಲೀಕರೆ ಆಗಿದ್ದು ನಿರ್ಬೀತಿಯಿಂದ ಅದೇ ಜಾಗದಲ್ಲಿ ವಾಸಿಸಬಹುದು ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ತಹಶೀಲ್ದಾರ್ ಶ್ರೀ. ಪ್ರದೀಪ್, ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜಿ., ಪುರಸಭೆ ಅಧ್ಯಕ್ಷರಾದ ಶ್ರೀ ಯೋಗಿಶ್ ದೇವಾಡಿಗ, ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಉಷಾ. ಕೆ. ಹಾಗೂ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಫಲಾಭವಿಗಳು ಹಾಜರಿದ್ದರು.