ಉಡುಪಿ : ಫೆಬ್ರವರಿ 02:ಶ್ರೀ ಪುತ್ತಿಗೆ ಮಠದ ಆಡಳಿತದಲ್ಲಿರುವ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನಕ್ಕೆ ಭಕ್ತರ ಸಹಕಾರದಿಂದ 20 ಲಕ್ಷಕ್ಕೂ ಹೆಚ್ಚಿನ ವೆಚ್ಚ ದಲ್ಲಿ ನಿರ್ಮಾ ಣಗೊಂಡ ನೂತನ ರಥದ ಸಮರ್ಪಣಾ ಕಾರ್ಯಕ್ರಮದ ಶೋಭಾಯಾತ್ರೆಗೆ ಪರ್ಯಾಯಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಗೀತಾಮಂದಿರದ ಬಳಿ ರಥಕ್ಕೆ ಚಾಲನೆ ನೀಡಿದರು.
ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಮೂಲಕ ಕಡಿಯಾಳಿ ಮಾರ್ಗವಾಗಿ ವಿವಿಧ ವೇಷಭೂಷಣ ಬಿರುದಾಳಿಯೊಂದಿಗೆ ರಥದ ಮೆರವಣಿಗೆ ನೆರವೇರಿತು
ಬಳಿಕ ಪಣಿಯಾಡಿಯ ಅನಂತಾಸನ ದೇವರ ಪ್ರಾಂಗಣದಲ್ಲಿ ಕಿಕ್ಕಿರಿದ ಜನಸ್ತೋಮದ ಮಧ್ಯೆ. ಅನನಂತಾಸನ ದೇವರಿಗೆ ಪರಮ ಪೂಜ್ಯ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಿಯ ತೀರ್ಥ ಶ್ರೀಪಾದರು ಸಮರ್ಪಿಸಿದರು.

ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡು ತ್ತ ರಥದ ಸಮರ್ಪಣೆಯಿಂದ ಭಕ್ತ ಜನರ ಮನೋರಥ ನೆರವೇರುತ್ತೆ, ದೇಹವೇ ಭಗವಂತ ನೀಡಿದ ರಥ, ಈ ರಥದ ಸಮರ್ಪಣೆಯಿಂದ ನಮ್ಮ ದೇಹವೆಂಬ ರಥವೂ ಸದೃಢ ವಾಗಲಿದೆ, ದೇಶವೂ ಸುಭಿಕ್ಷೆಯಾಗಲಿದೆ ಎಂದು ಹಾರೈಸಿದರು.
ದಾರುಮಯ ಸುಂದರ ರಥವನ್ನು ನಿರ್ಮಿಸಿದ ಶಿಲ್ಪಿ ಪರಮೇಶ್ವರ ಆಚಾರ್ಯ ಇವರನ್ನು ಪೂಜ್ಯ ಶ್ರೀಪಾದರು ಶಾಲು ಹೊದಿಸಿ ಪ್ರಸಾದವನ್ನು ನೀಡಿ ಹರಸಿದರು.
ಉಡುಪಿ ಶಾಸಕ ಶ್ರೀ ಯಶಪಾಲ್ ಸುವರ್ಣ, ಶ್ರೀ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯ , ಕಾಂಚನ್ ಮೋಟಾರ್ಸ್ ಶ್ರೀ ಪ್ರಸಾದ್ ರಾಜ್ ಕಾಂಚನ್ , ಖ್ಯಾತ ಜೋತಿಷಿ ವಿದ್ವಾನ್ ಗೋಪಾಲ ಜೋಯಿಸ್, ನಗರಸಭಾ ಸದಸ್ಯ ಶ್ರೀ ಗಿರೀಶ್ ಅಂಚನ್ ,ಇಂದ್ರಾಳಿ ಜಯಕರ ಶೆಟ್ಟಿ, ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ವಿಜಯರಾಘವ ರಾವ್ , ಹಾಗೂ ಖ್ಯಾತ ವಕೀಲರಾದ ಶ್ರೀ ರಾಮಚಂದ್ರ ಅಡಿಗ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ವತಿಯಿಂದ ದಿವಾನರಾದ ಶ್ರೀ ನಾಗರಾಚಾರ್ಯ ಇವರು ಪ್ರಸ್ತಾವನೆಗೈದರು
ವಿದ್ವಾನ್ ಶ್ರೀ ಸುನಿಲಾಚಾರ್ಯ ರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಜೀರ್ಣೋದ್ಧಾರ ಸಮಿತಿಯ ಶ್ರೀ ರಾಘವೇಂದ್ರ ಭಟ್ ಅವರು ಧನ್ಯವಾದವಿತ್ತರು.








