Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಂಗಳೂರಿನಲ್ಲಿ ಹಳೇ ಮನೆ ಕೆಡವುವ ವೇಳೆ ಗೋಡೆ ಕುಸಿದು ಇಬ್ಬರು ಸಾವು –  ಗುತ್ತಿಗೆದಾರನ ವಿರುದ್ಧ ಪ್ರಕರಣ ಧಾಖಲು 

Dhrishya News by Dhrishya News
13/09/2024
in ಸುದ್ದಿಗಳು
0
ಮಂಗಳೂರಿನಲ್ಲಿ ಹಳೇ ಮನೆ ಕೆಡವುವ ವೇಳೆ ಗೋಡೆ ಕುಸಿದು ಇಬ್ಬರು ಸಾವು –  ಗುತ್ತಿಗೆದಾರನ ವಿರುದ್ಧ ಪ್ರಕರಣ ಧಾಖಲು 
0
SHARES
29
VIEWS
Share on FacebookShare on Twitter

ಮಂಗಳೂರು :ಸೆಪ್ಟೆಂಬರ್ 13:ಮನೆ ಕೆಡುವವ ವೇಳೆ ಗೋಡೆ ಕುಸಿದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.

ಮಂಗಳೂರಿನ ಕರಂಗಲ್ಪಾಡಿಯ ಸಿಜಿ ಕಾಮತ್ ರಸ್ತೆಯಲ್ಲಿ ಗುರುವಾರ ಹಳೆ ಮನೆ ಕೆಡವುವ ವೇಳೆ ಗೋಡೆ ಕುಸಿದು ಇಬ್ಬರು ಸಜೀವ ಸಮಾಧಿಯಾಗಿದ್ದಾರೆ.

ಮಂಗಳೂರಿನ ಜೈಲ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಹಳೆಯ ಮನೆಯನ್ನು ಕೆಡವುತ್ತಿದ್ದ ವೇಳೆ ನೋಡನೋಡುತ್ತಲೇ ಗೋಡೆ ಅಲ್ಲಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಬಿದ್ದಿದೆ.

ಮೂಲಗಳ ಪ್ರಕಾರ ಜೇಮ್ಸ್‌ ಜತ್ತನ್ನ ಪೂರ್ವಜರ ಮನೆ ಇದಾಗಿದ್ದು, ಪಾಲಿನಲ್ಲಿ ಅವರಿಗೆ ಈ ಮನೆ ಸಿಕ್ಕಿತ್ತು. ಮನೆಗೆ ತಾಗಿಕೊಂಡಂತೆ ಅಡ್ವಿನ್‌ ಅವರ ಮನೆ ಕೂಡ ಇದೆ. ಜೇಮ್ಸ್‌ ಅವರು ತನ್ನ ಹಳೆ ಮನೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಮನೆ ಕಟ್ಟಲು ಉದ್ದೇಶಿಸಿದ್ದು, ಅದರಂತೆ ಜೆಸಿಬಿ ಮೂಲಕ ಮನೆ ಕೆಡಹುವ ಕಾರ್ಯ ಬುಧವಾರ ಆರಂಭವಾಗಿತ್ತು. ಗುರುವಾರ ಬೆಳಗ್ಗೆ ಮತ್ತೆ ಕೆಲಸ ಆರಂಭವಾಗಿದ್ದು, ಈ ವೇಳೆ ಜೇಮ್ಸ್‌ ಸ್ಥಳದಲ್ಲೇ ಇದ್ದು ಉಸ್ತುವಾರಿ ನೋಡಿಕೊಂಡಿದ್ದರು.

ಈ ಮನೆಗೆ ತಾಗಿಕೊಂಡೇ ಅಡ್ವಿನ್‌ ಮನೆ ಇರುವುದರಿಂದ ಕೆಡಹುವ ಸಮಯದಲ್ಲಿ ಅಡ್ವಿನ್‌, ತಮ್ಮ ಮನೆಗೆ ಹಾನಿಯಾಗಿದೆಯೇ ಎಂಬುದನ್ನು ನೋಡಲು ಜೇಮ್ಸ್‌ ಮನೆ ಕಂಪೌಂಡಿಗೆ ಬಂದಿದ್ದರು. ಈ ಸಂದರ್ಭ ಜೇಮ್ಸ್‌ ಅವರು ಪಕ್ಕದ ಇನ್ನೊಂದು ಮನೆಯ ಜಗುಲಿಯಲ್ಲಿದ್ದು, ಅಡ್ವಿನ್‌ ಕರೆದರೆಂದು ಅಲ್ಲಿಗೆ ತೆರಳಿ ಮಾತುಕತೆ ನಡೆಸುತ್ತಿದ್ದಾಗ ಹಠಾತ್ತನೆ ಕೆಡಹುತ್ತಿದ್ದ ಮನೆಯ ಗೋಡೆ ಸಮೇತ ಬೃಹತ್‌ ಕಾಂಕ್ರೀಟ್‌ ಲಿಂಟಲ್‌ ಇಬ್ಬರ ಮೇಲೂ ಉರುಳಿಬಿತ್ತು. ಭಾರೀ ಗಾತ್ರದ ಲಿಂಟಲ್‌ ಆಗಿದ್ದರಿಂದ ಇಬ್ಬರೂ ಅದರಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ

ಮನೆ ಕಟ್ಟಲು ಬಹರೇನ್‌ನಿಂದ ಬಂದಿದ್ದ ಜೇಮ್ಸ್ ದಂಪತಿ

ಇನ್ನು ಜೇಮ್ಸ್‌ ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದರು. ಪೂರ್ವಜರ ಕಾಲದ ಮನೆ ತೀರ ಹಳೆಯದಾಗಿ ಶಿಥಿಲವಾಗಿದ್ದರಿಂದ ನಗರದ ಜ್ಯೋತಿಯಲ್ಲಿ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಪತ್ನಿ, ಪುತ್ರಿ ಫ್ಲಾಟ್‌ನಲ್ಲಿದ್ದರೆ, ಜೇಮ್ಸ್‌ ಬಹರೇನ್‌ನಲ್ಲಿ ಉದ್ಯೋಗದಲ್ಲಿದ್ದರು. ಹಳೆ ಮನೆ ಕೆಡವಿ ಹೊಸ ಮನೆ ಕಟ್ಟಲೆಂದೇ ಅವರು ರಜೆ ಹಾಕಿ ಊರಿಗೆ ಮರಳಿದ್ದರು. ಆದರೆ ಅದೇ ಮನೆ ಆವರಣದಲ್ಲಿ ನಡೆದ ದುರಂತದಲ್ಲಿ ಜೇಮ್ಸ್ ಸಾವನ್ನಪ್ಪಿದ್ದಾರೆ.

Previous Post

ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡುವ ಸಲುವಾಗಿ  ಪಿಎಂ ಇ-ಡ್ರೈವ್ ಸಬ್ಸಿಡಿ ಸ್ಕೀಮ್  ಆರಂಭ..!!

Next Post

ಆತ್ಮಶ್ರಿದ್ಧಾನಂದ ಅವರಿಂದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT) “ಒತ್ತಡವನ್ನು ಮೀರುವುದು – ವಿವೇಕಾನಂದ ಮಾರ್ಗ” ಕುರಿತು ಸ್ಪೂರ್ತಿದಾಯಕ ಉಪನ್ಯಾಸ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಆತ್ಮಶ್ರಿದ್ಧಾನಂದ ಅವರಿಂದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT) “ಒತ್ತಡವನ್ನು ಮೀರುವುದು – ವಿವೇಕಾನಂದ ಮಾರ್ಗ” ಕುರಿತು ಸ್ಪೂರ್ತಿದಾಯಕ ಉಪನ್ಯಾಸ..!!

ಆತ್ಮಶ್ರಿದ್ಧಾನಂದ ಅವರಿಂದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT) "ಒತ್ತಡವನ್ನು ಮೀರುವುದು - ವಿವೇಕಾನಂದ ಮಾರ್ಗ" ಕುರಿತು ಸ್ಪೂರ್ತಿದಾಯಕ ಉಪನ್ಯಾಸ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪಡುಬಿದ್ರಿ : ಭೀಕರ ರಸ್ತೆ ಅಪಘಾತ- ಗೌಜಿ ಇವೆಂಟ್‌ ಮಾಲೀಕ ಸಾವು..!!

ಪಡುಬಿದ್ರಿ : ಭೀಕರ ರಸ್ತೆ ಅಪಘಾತ- ಗೌಜಿ ಇವೆಂಟ್‌ ಮಾಲೀಕ ಸಾವು..!!

10/12/2025
ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉಡುಪಿಗೆ ಬಂದಿದ್ದ 10 ಬಾಂಗ್ಲಾ ಪ್ರಜೆಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ..!!

ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉಡುಪಿಗೆ ಬಂದಿದ್ದ 10 ಬಾಂಗ್ಲಾ ಪ್ರಜೆಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ..!!

10/12/2025
EXCON 2025 ರಲ್ಲಿ ಟಾಟಾ ಮೋಟಾರ್ಸ್ ನವೀನ, ಸುಸ್ಥಿರ ಮತ್ತು ಬುದ್ಧಿವಂತ ಚಲನಶೀಲತೆ ಪರಿಹಾರಗಳೊಂದಿಗೆ ಮುಂಚೂಣಿಯಲ್ಲಿದೆ..!!

EXCON 2025 ರಲ್ಲಿ ಟಾಟಾ ಮೋಟಾರ್ಸ್ ನವೀನ, ಸುಸ್ಥಿರ ಮತ್ತು ಬುದ್ಧಿವಂತ ಚಲನಶೀಲತೆ ಪರಿಹಾರಗಳೊಂದಿಗೆ ಮುಂಚೂಣಿಯಲ್ಲಿದೆ..!!

09/12/2025
ಮಾಹೆಗೆ ಪ್ರತಿಷ್ಠಿತ ಸಿಐಐ ಕೈಗಾರಿಕೆ-ಶೈಕ್ಷಣಿಕ ಪಾಲುದಾರಿಕೆ ಪ್ರಶಸ್ತಿ..!!

ಮಾಹೆಗೆ ಪ್ರತಿಷ್ಠಿತ ಸಿಐಐ ಕೈಗಾರಿಕೆ-ಶೈಕ್ಷಣಿಕ ಪಾಲುದಾರಿಕೆ ಪ್ರಶಸ್ತಿ..!!

09/12/2025

Recent News

ಪಡುಬಿದ್ರಿ : ಭೀಕರ ರಸ್ತೆ ಅಪಘಾತ- ಗೌಜಿ ಇವೆಂಟ್‌ ಮಾಲೀಕ ಸಾವು..!!

ಪಡುಬಿದ್ರಿ : ಭೀಕರ ರಸ್ತೆ ಅಪಘಾತ- ಗೌಜಿ ಇವೆಂಟ್‌ ಮಾಲೀಕ ಸಾವು..!!

10/12/2025
ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉಡುಪಿಗೆ ಬಂದಿದ್ದ 10 ಬಾಂಗ್ಲಾ ಪ್ರಜೆಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ..!!

ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉಡುಪಿಗೆ ಬಂದಿದ್ದ 10 ಬಾಂಗ್ಲಾ ಪ್ರಜೆಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ..!!

10/12/2025
EXCON 2025 ರಲ್ಲಿ ಟಾಟಾ ಮೋಟಾರ್ಸ್ ನವೀನ, ಸುಸ್ಥಿರ ಮತ್ತು ಬುದ್ಧಿವಂತ ಚಲನಶೀಲತೆ ಪರಿಹಾರಗಳೊಂದಿಗೆ ಮುಂಚೂಣಿಯಲ್ಲಿದೆ..!!

EXCON 2025 ರಲ್ಲಿ ಟಾಟಾ ಮೋಟಾರ್ಸ್ ನವೀನ, ಸುಸ್ಥಿರ ಮತ್ತು ಬುದ್ಧಿವಂತ ಚಲನಶೀಲತೆ ಪರಿಹಾರಗಳೊಂದಿಗೆ ಮುಂಚೂಣಿಯಲ್ಲಿದೆ..!!

09/12/2025
ಮಾಹೆಗೆ ಪ್ರತಿಷ್ಠಿತ ಸಿಐಐ ಕೈಗಾರಿಕೆ-ಶೈಕ್ಷಣಿಕ ಪಾಲುದಾರಿಕೆ ಪ್ರಶಸ್ತಿ..!!

ಮಾಹೆಗೆ ಪ್ರತಿಷ್ಠಿತ ಸಿಐಐ ಕೈಗಾರಿಕೆ-ಶೈಕ್ಷಣಿಕ ಪಾಲುದಾರಿಕೆ ಪ್ರಶಸ್ತಿ..!!

09/12/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved