Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಕೈಗೆಟಕುವ ಬೆಲೆಯಲ್ಲಿ ಐವಿಎಫ್‌ ಚಿಕಿತ್ಸೆ : SAR [ಎಸ್‌ಎಆರ್‌] ಹೆಲ್ತ್‌ಲೈನ್‌ ಮತ್ತು ಮಾಹೆ ಜಂಟಿ ಪ್ರಯತ್ನ..!!

Dhrishya News by Dhrishya News
02/02/2024
in ಆರೋಗ್ಯ
0
ಕೈಗೆಟಕುವ ಬೆಲೆಯಲ್ಲಿ ಐವಿಎಫ್‌ ಚಿಕಿತ್ಸೆ : SAR [ಎಸ್‌ಎಆರ್‌] ಹೆಲ್ತ್‌ಲೈನ್‌ ಮತ್ತು ಮಾಹೆ ಜಂಟಿ ಪ್ರಯತ್ನ..!!
0
SHARES
24
VIEWS
Share on FacebookShare on Twitter

ಮಣಿಪಾಲ್‌ 02 ಫೆಬ್ರವರಿ 2024 : ಐವಿಎಫ್‌ ಅಥವಾ ಇನ್‌ ವಿಟ್ರೊ ಫರ್ಟಿಲೈಸೇಷನ್‌ [ಕೃತಕ ಗರ್ಭಧಾರಣೆ] ಚಿಕಿತ್ಸೆಯ ಅವಶ್ಯವಿರುವವರಿಗೆ ಸುಲಭವಾಗಿ ಮತ್ತು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಿಸುವ ಪ್ರಮುಖ ಹೆಜ್ಜೆಯಾಗಿ ಐವಿಎಫ್‌ ಚಿಕಿತ್ಸೆಯಲ್ಲಿ ಮುಂಚೂಣಿಯ ಹೆಸರಾಗಿರುವ SAR [ಎಸ್‌ಎಆರ್‌] ಹೆಲ್ತ್‌ಲೈನ್‌ ಮತ್ತು ಮಣಿಪಾಲ್‌ ಆಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಸಹಭಾಗಿತ್ವವನ್ನು ಪ್ರಕಟಿಸಿವೆ. ಎರಡು ಪ್ರತಿಷ್ಠಿತ ಸಂಸ್ಥೆಗಳ ಒಡಂಬಡಿಕೆಯು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಭ್ರೂಣಶಾಸ್ತ್ರ ಚಿಕಿತ್ಸಾ ಕೇಂದ್ರದ [ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಇನ್‌ ಕ್ಲಿನಿಕಲ್‌ ಎಂಬ್ರಿಯಾಲಜಿ] ತಜ್ಞತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಐವಿಎಫ್‌ನಂಥ ಚಿಕಿತ್ಸೆಯನ್ನು ಮಿತಬೆಲೆಯಲ್ಲಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಎರಡೂ ಸಂಸ್ಥೆಗಳು ಸಂಯುಕ್ತವಾಗಿ ಪ್ರಯತ್ನಿಸಲಿದ್ದು ಈ ಒಪ್ಪಂದವು ಆರೋಗ್ಯ ಕ್ಷೇತ್ರದಲ್ಲಿ ನಿರಂತರ ಸಂಶೋಧನೆಯನ್ನು ಉತ್ತೇಜಿಸುವ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಆಶಯವನ್ನು ಹೊಂದಿದೆ.

ಎರಡೂ ಪ್ರಮುಖ ಸಂಸ್ಥೆಗಳು ಸಹಭಾಗಿತ್ವವನ್ನು ಹೊಂದಿದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ ಮಾಹೆಯ ಆರೋಗ್ಯವಿಜ್ಞಾನ ವಿಭಾಗದ ಸಹಉಪಕುಲಪತಿಗಳಾದ ಡಾ. ಶರತ್‌ ರಾವ್‌ ಅವರು, ‘ನಮ್ಮ ಉದ್ದೇಶವು ಐವಿಎಫ್‌ ಚಿಕಿತ್ಸೆಯನ್ನು ಸರಳದರದಲ್ಲಿ ಮತ್ತು ಅತ್ಯುತ್ತಮ ಗುಣಮಟ್ಟದಲ್ಲಿ ನೀಡುವುದಾಗಿದೆ. ಅಂಥ ವ್ಯವಸ್ಥೆಯು ಜನರಿಗೆ ಪರಿಣಾಮಕಾರಿಯಾಗಿ ತಲುಪಲು ಸ್ಥಳೀಯ ಆರೋಗ್ಯವಿಜ್ಞಾನ ವ್ಯವಸ್ಥೆಯನ್ನು ಬಲಗೊಳಿಸಬೇಕಾಗಿದೆ. ಈ ಒಡಂಬಡಿಕೆಯು ಅಂಥದೇ ಮಹತ್ತ್ವದ ಪ್ರಯತ್ನವಾಗಿದೆ’ ಎಂದರು.

 

ಭ್ರೂಣಶಾಸ್ತ್ರ ಚಿಕಿತ್ಸಾ ಕೇಂದ್ರ [ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಇನ್‌ ಕ್ಲಿನಿಕಲ್‌ ಎಂಬ್ರಿಯಾಲಜಿ] ದ ಮುಖ್ಯಸ್ಥರಾದ ಡಾ. ಸತೀಶ್‌ ಅಡಿಗ ಅವರು ಈ ಮಹತ್ವಪೂರ್ಣ ಹೆಜ್ಜೆಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸುತ್ತ, ‘ಇದು ನಮ್ಮ ಸಂಸ್ಥೆಯ ನಿರಂತರ ಸಂಶೋಧನೆ ಮತ್ತು ಕಾರ್ಯಬದ್ಧತೆಗೆ ದೊರೆತ ಮನ್ನಣೆಯಾಗಿದೆ. SAR ಹೆಲ್ತ್‌ಲೈನ್‌ನಂಥ ಪ್ರತಿಷ್ಠಿತ ಸಂಸ್ಥೆಯು ಮಾಹೆಯ ಭ್ರೂಣಶಾಸ್ತ್ರ ಚಿಕಿತ್ಸಾ ಕೇಂದ್ರದೊಂದಿಗೆ ಜನಪರ ಕಾಳಜಿಯ ಒಡಂಬಡಿಕೆಗೆ ಮುಂದೆ ಬಂದಿರುವುದು ಅಭಿಮಾನದ ಸಂಗತಿಯಾಗಿದೆ. ಐವಿಎಫ್‌ನಂಥ ಚಿಕಿತ್ಸಾ ಸೌಲಭ್ಯವು ಆವಶ್ಯಕವಿರುವವರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಎರಡೂ ಸಂಸ್ಥೆಗಳು ಜಂಟಿಯಾಗಿ ಪ್ರಯತ್ನಿಸಲಿವೆ’ ಎಂದರು.

 

SAR ಹೆಲ್ತ್‌ಲೈನ್‌ನ ಸನ್ನಿ ಎಫ್ರಾಮ್‌ ಅವರು ಈ ಸಹಭಾಗಿತ್ವದ ಕುರಿತು ಧನಾತ್ಮಕವಾಗಿ ಸ್ಪಂದಿಸುತ್ತ, ‘ನಾವು ಮಣಿಪಾಲ ಆರೋಗ್ಯವಿಜ್ಞಾನ ಸಂಸ್ಥೆಯ ಕಾರ್ಯವೈಖರಿಯಿಂದ ಪ್ರಭಾವಿತರಾಗಿದ್ದೇವೆ. ಈ ಸಹಭಾಗಿತ್ವವು ಮುಂದಿನ ವರ್ಷಗಳಲ್ಲಿ ಎರಡೂ ಸಂಸ್ಥೆಗಳ ಪ್ರಗತಿಗೂ ಕಾರಣವಾಗಲಿದೆ’ ಎಂದರು.

 

ಕೆಎಂಸಿಯ ಡೀನ್‌ ಡಾ. ಪದ್ಮರಾಜ ಹೆಗ್ಡೆ, ಸಂತಾನೋತ್ಪತ್ತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಗುರುಪ್ರಸಾದ್‌ ಕಳ್ತೂರ್‌, SAR ಹೆಲ್ತ್‌ಲೈನ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನೂಪ್‌ ಶ್ರೀಧರನ್‌ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Previous Post

Paytm ಅಪ್ಲಿಕೇಶನ್ ಎಂದಿನಂತೆ ಫೆಬ್ರವರಿ 29 ರ ನಂತರವೂ ಕಾರ್ಯನಿರ್ವಹಿಸುತ್ತದೆ: ಸಿಇಒ ವಿಜಯ್ ಶೇಖರ್ ಶರ್ಮಾ ಸ್ಪಷ್ಟನೆ..!!

Next Post

ಪರ್ಯಾಯ ಶ್ರೀ ಪುತ್ತಿಗೆ ಮಠ : ಶ್ರೀಪುರಂದರದಾಸರ ಆರಾಧನೆ ಪ್ರಯುಕ್ತ , “ಪುರಂದರವಿಠಲ ಅಂಕಿತವುಳ್ಳ ಕೀರ್ತನೆಗಳ ಸ್ಪರ್ಧೆ”..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪರ್ಯಾಯ ಶ್ರೀ ಪುತ್ತಿಗೆ ಮಠ : ಶ್ರೀಪುರಂದರದಾಸರ ಆರಾಧನೆ ಪ್ರಯುಕ್ತ , “ಪುರಂದರವಿಠಲ ಅಂಕಿತವುಳ್ಳ ಕೀರ್ತನೆಗಳ ಸ್ಪರ್ಧೆ”..!!

ಪರ್ಯಾಯ ಶ್ರೀ ಪುತ್ತಿಗೆ ಮಠ : ಶ್ರೀಪುರಂದರದಾಸರ ಆರಾಧನೆ ಪ್ರಯುಕ್ತ , "ಪುರಂದರವಿಠಲ ಅಂಕಿತವುಳ್ಳ ಕೀರ್ತನೆಗಳ ಸ್ಪರ್ಧೆ"..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ : ನಿರಂತರ ಮಳೆಯ ಹಿನ್ನಲೆ ನಾಳೆ (ಜೂನ್ 12) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ,ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

ಉಡುಪಿ : ನಿರಂತರ ಮಳೆಯ ಹಿನ್ನಲೆ ನಾಳೆ (ಜೂನ್ 12) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ,ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

11/06/2025
ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ..!!

ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ..!!

11/06/2025
ಸರಕಾರದ ಉಚಿತ ಅನ್ನ ಬಾಗ್ಯದ ಅಕ್ಕಿ ಅಕ್ರಮ ದಾಸ್ತಾನು ಆರೋಪ: ದಿನಸಿ ಅಂಗಡಿ ಮಾಲಕನ ಬಂಧನ..!

ಸರಕಾರದ ಉಚಿತ ಅನ್ನ ಬಾಗ್ಯದ ಅಕ್ಕಿ ಅಕ್ರಮ ದಾಸ್ತಾನು ಆರೋಪ: ದಿನಸಿ ಅಂಗಡಿ ಮಾಲಕನ ಬಂಧನ..!

11/06/2025
ಕಾರ್ಕಳ :ಮುಂಬೈಯಲ್ಲಿ ಹೋಟೆಲ್ ನಡೆಸುತ್ತಿದ್ದ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ..!!

ಕಾರ್ಕಳ :ಮುಂಬೈಯಲ್ಲಿ ಹೋಟೆಲ್ ನಡೆಸುತ್ತಿದ್ದ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ..!!

09/06/2025

Recent News

ಉಡುಪಿ : ನಿರಂತರ ಮಳೆಯ ಹಿನ್ನಲೆ ನಾಳೆ (ಜೂನ್ 12) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ,ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

ಉಡುಪಿ : ನಿರಂತರ ಮಳೆಯ ಹಿನ್ನಲೆ ನಾಳೆ (ಜೂನ್ 12) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ,ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

11/06/2025
ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ..!!

ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ..!!

11/06/2025
ಸರಕಾರದ ಉಚಿತ ಅನ್ನ ಬಾಗ್ಯದ ಅಕ್ಕಿ ಅಕ್ರಮ ದಾಸ್ತಾನು ಆರೋಪ: ದಿನಸಿ ಅಂಗಡಿ ಮಾಲಕನ ಬಂಧನ..!

ಸರಕಾರದ ಉಚಿತ ಅನ್ನ ಬಾಗ್ಯದ ಅಕ್ಕಿ ಅಕ್ರಮ ದಾಸ್ತಾನು ಆರೋಪ: ದಿನಸಿ ಅಂಗಡಿ ಮಾಲಕನ ಬಂಧನ..!

11/06/2025
ಕಾರ್ಕಳ :ಮುಂಬೈಯಲ್ಲಿ ಹೋಟೆಲ್ ನಡೆಸುತ್ತಿದ್ದ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ..!!

ಕಾರ್ಕಳ :ಮುಂಬೈಯಲ್ಲಿ ಹೋಟೆಲ್ ನಡೆಸುತ್ತಿದ್ದ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ..!!

09/06/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved