ಉಡುಪಿ: ದಿನಾಂಕ 22-08-2026ರಂದು ಜರುಗಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ರವರು ಪ್ರಶಸ್ತಿ ಪ್ರದಾನ ಮಾಡಿದರು.
ಸಂಘದ ಅಧ್ಯಕ್ಷರಾದ ಕರ್ನಲ್ ಡಾ. ಎಫ್. ಇ. ಎ. ರೋಡ್ರಿಗಸ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪರಮಶಿವ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಂಘವು ವರದಿ ವರ್ಷದಲ್ಲಿ ₹1.79 ಕೋಟಿ ನಿವ್ವಳ ಲಾಭ ಗಳಿಸಿದ್ದು, ₹75 ಕೋಟಿ ದುಡಿಯುವ ಬಂಡವಾಳ, ₹52 ಕೋಟಿ ಠೇವಣಿಗಳು ಹಾಗೂ ₹40 ಕೋಟಿ ಸಾಲ ಹೊರಬಾಕಿ ಹೊಂದಿದೆ. ಸತತ 8 ವರ್ಷಗಳಿಂದ ಅತ್ಯುತ್ತಮ ಸಾಧನಾ ಪ್ರಶಸ್ತಿಯನ್ನು ಗಳಿಸುತ್ತಾ ಬಂದಿರುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಹಾಗೂ ಮಂಗಳೂರು ಉಪನಿಬಂಧಕರಾದ ಹೆಚ್. ರಮೇಶ್, ಉಡುಪಿ ಸಹಕಾರ ಯೂನಿಯನ್ನ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ನಮ್ಮ ಸಂಘದ ನಿರ್ದೇಶಕರಾದ ಗಣಪಯ್ಯ ಶೇರಿಗಾರ್, ಪ್ರಭಾಕರ ನಾಯಕ್ ಹಾಗೂ ರಾಘವೇಂದ್ರ ಪಿ. ಎಸ್. ಉಪಸ್ಥಿತರಿದ್ದರು.






