ಬೈಂದೂರು : ನಮ್ಮ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯ ಹಲವೆಡ ದೊಡ್ಡ ದೊಡ್ಡ ಗುಂಡಿಗಳಾಗಿವೆ. ಇದರಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ತಾಲಾ ಮಕ್ಕಳಿಗೆ ಪ್ರತಿದಿನ ತೀವ್ರ ತೊಂದರೆಯಾಗುತ್ತಿದೆ ಎಂದು ಪಡುವರಿ ಗ್ರಾಮದ ಅಳಿವೆಕೋಡಿಯ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಮೀನುಗಾರರ ಮುಖಂಡ ನಾಗೇಶ ಖಾರ್ವಿ ನೇತೃತ್ವದಲ್ಲಿ ಬೈಂದೂರು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಇದೇ ರಸ್ತೆಯನ್ನು ಸಾರ್ವಜನಿಕರು, ರೈತರು, ಮೀನುಗಾರರು, ಉದ್ಯೋಗಸ್ಥರು ಹಾಗೂ ತುರ್ತು ವೈದ್ಯಕೀಯ ಆ್ಯಂಬುಲೆನ್ಸ್ಗಳು ಬಳಸುತ್ತಿವೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹಾಳಾಗಿ ವಾಹನ ಸಂಚಾರ ಅಪಾಯಕಾರಿಯಾಗಿದೆ. ಈ ಕುರಿತು ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ತೀವು ನಿರಾಸೆ ಉಂಟಾಗಿದೆ ಆದ್ದರಿಂದ ಈ ರಸ್ತೆಯನ್ನು ತುರ್ತು ಆದ್ಯತೆಯ ಮೇರೆಗೆ ದುರಸ್ತಿ ಮಾಡಿ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಈ ರಸ್ತೆಯಲ್ಲಿ ಪ್ರತಿದಿನ ಶಾಲಾ ವಾಹನಗಳು ಸಂಚರಿಸುತ್ತಿದ್ದು. ಸುಮಾರು 150 ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ಅಪಘಾತ ಸಂಭವಿಸುವ ಅಪಾಯ ಹೆಚ್ಚಾ ಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ. ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಹದಗೆಟ್ಟು ಸಂಚಾರ ದುಸ್ತರವಾಗಿದ್ದು ಶೀಘ್ರ ದುರಸ್ಥಿ ಮಾಡಬೇಕೆಂದು ಆಗ್ರಹಿಸಿದರು.
ರೂ.2 ಕೋಟಿ ಮಂಜೂರು ಮಾಡಿದ್ದರು; ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿ.ಪಂ. ಮಾಜಿ ಸದಸ್ಯ ಸುರೇಶ ಬಟ್ಟಾಡಿ, ಈ ಹಿಂದೆ ಮೀನುಗಾರಿಕಾ
ಸಚಿವರು ಶಾಸಕ ಗುರುರಾಜ ಗಂಟೆಹೊಳೆ ಇವರ ಪ್ರಸ್ತಾವನೆಗೆ ಸ್ಪಂದಿಸಿ ಮೀನುಗಾರಿಕಾ ಇಲಾಖೆಯ ಕೊಂಡಿ ಯೋಜನೆ ಮೂಲಕ ರೂ. ಎರಡು ಕೋಟಿ ಮಂಜೂರು ಮಾಡಿದ್ದರು. ಇದರಲ್ಲಿ ರೂ.1.5 ಕೋಟಿ ಉಪ್ಪುಂದ ಮೀನುಗಾರಿಕಾ ರಸ್ತೆ ಹಾಗೂ ಉಳಿದ 50 ಲಕ್ಷ ತಾರಾಪತಿ-ಅಳಿವೆಕೋಡಿ ರಸ್ತೆ ನಿರ್ಮಾಣಕ್ಕೆ ನಿಗದಿಯಾಗಿತ್ತು, ಆದರೆ ಮೀನುಗಾರರ ಮುಖಂಡ ಹಾಗೂ ಮಾಜಿ ಶಾಸಕರ ರಾಜಕೀಯದಿಂದಾಗಿ ಈ ಹಣ ಕೊಡೇರಿ ಮೀನುಗಾರಿಕಾ ರಸ್ತೆಗೆ ವರ್ಗಾವಣೆಯಾಗಿದ್ದ ವಿಷಯ ಪ್ರಸ್ತಾಪಿಸಿದರು. ಈ ವಿಷಯ ಪ್ರಸ್ತಾಪಿಸಿದಂತೆ ಕೆಲಕಾಲ ಪ್ರತಿಭಟನಾ ಕಾರರಲ್ಲಿ ಗೊಂದಲ ಉಂಟಾಯಿತು.
ಬೈಂದೂರು ತಹಶೀಲ್ದಾರ್ ರವಿರಾಜ್ ದೀಕ್ಷಿತ್ ಹಾಗೂ ಪಪo.ಮುಖ್ಯಾಧಿಕಾರಿ ಅಜಯ್ ಭಂಡಾರ್ ಕರ್ ಇವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ವೀರಭದ್ರ ಖಾರ್ವಿ, ಟಿ.ಗೋಪಾಲ ಖಾರ್ವಿ, ರಾಘವೇಂದ್ರ ಖಾರ್ವಿ, ಗಣೇಶ ಎಮ್.ಕೆ, ರವೀಂದ್ರ ಖಾರ್ವಿ, ಸೋಮಶೇಖರ್, ಮೀನುಗಾರ ಮುಖಂಡರು, ಅಳಿವೆಕೋಡಿ ಹಾಗೂ ತಾರಾಪತಿ ಗ್ರಾಮಸ್ಥರು ಹಾಜರಿದ್ದರು.







