ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಅಂಗ ಸಂಸ್ಥೆಯಾದ ಭಜನಾ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚಿಗೆ ನೆರವೇರಿತು. 2026-27 ನೇ ಸಾಲಿನ ಅಧ್ಯಕ್ಷರಾಗಿ ಕರುಣಾಕರ ಆಚಾರ್ಯ, ಕಾರ್ಯದರ್ಶಿಯಾಗಿ ಪ್ರಸಾದ್ ಆಚಾರ್ಯ ಹಿರಿಯಂಗಡಿ, ಉಪಾಧ್ಯಕ್ಷರಾಗಿ ದಿವಾಕರ್ ಆಚಾರ್ಯ ನಿಟ್ಟೆ, ಕೋಶಾಧಿಕಾರಿಯಾಗಿ ಪಿ ರವಿ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಆಚಾರ್ಯ ಬೈಲೂರು ಆಯ್ಕೆಯಾದರು.
ನೂತನ ಸಮಿತಿಯ ಸದಸ್ಯರಾಗಿ ಎಂ ರಮೇಶ ಆಚಾರ್ಯ ಅಂಡಾರು ಅಶೋಕ ಆಚಾರ್ಯ, ರಮೇಶ ಆಚಾರ್ಯ ಬಂಗ್ಲೆಗುಡ್ಡೆ, ಧನುಷ ಆಚಾರ್ಯ, ಜೀವನಚಾರ್ಯ ವೈ.ಟಿ. ಪ್ರಕಾಶ್ ಆಚಾರ್ಯ, ಕೆ. ವಿಜೇಂದ್ರ ಆಚಾರ್ಯ, ಸತೀಶ್ ಆಚಾರ್ಯ, ಹರೀಶ್ ಪಡ್ರೆ ಮತ್ತು ಪ್ರವೀಣ್ ಆಚಾರ್ಯ ಆಯ್ಕೆಯಾದರು.








