Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಆಂಧ್ರಪ್ರದೇಶದಲ್ಲಿ 3200+ ಕೋಟಿ ರೂ. ಹೂಡಿಕೆ ಘೋಷಿಸಿದ ಹೀರೋ ಮೋಟೋಕಾರ್ಪ್

ತಿರುಪತಿಯಲ್ಲಿ ಜಾಗತಿಕ ಮಟ್ಟದ ಭವಿಷ್ಯ ಸಿದ್ಧ ಬಿಡಿಭಾಗಗಳ ಕೇಂದ್ರಕ್ಕೆ ಭೂಮಿಪೂಜೆ

Dhrishya News by Dhrishya News
07/07/2026
in ಸುದ್ದಿಗಳು
0
ಆಂಧ್ರಪ್ರದೇಶದಲ್ಲಿ 3200+ ಕೋಟಿ ರೂ. ಹೂಡಿಕೆ ಘೋಷಿಸಿದ ಹೀರೋ ಮೋಟೋಕಾರ್ಪ್
0
SHARES
8
VIEWS
Share on FacebookShare on Twitter

● ಹೂಡಿಕೆಯ ಮಾರ್ಗಸೂಚಿ: ಹೀರೋ ಮೋಟೋಕಾರ್ಪ್ ಆಂಧ್ರಪ್ರದೇಶದಲ್ಲಿ ಒಟ್ಟು 3,200 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹೂಡಿಕೆಯನ್ನು ಘೋಷಿಸಿದೆ.
● ಮುಂದಿನ ಪೀಳಿಗೆಯ ಲಾಜಿಸ್ಟಿಕ್ಸ್: ತಿರುಪತಿಯಲ್ಲಿ ತನ್ನ ಎರಡನೇ ಜಾಗತಿಕ ಬಿಡಿಭಾಗಗಳ ಕೇಂದ್ರವನ್ನು ಸ್ಥಾಪಿಸಲು 750 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಲಿದೆ.
● ಭವಿಷ್ಯದ ಪ್ರತಿಭೆಗಳಿಗೆ ಪ್ರೋತ್ಸಾಹ: ತಾಂತ್ರಿಕ ಶಿಕ್ಷಣವನ್ನು ಬೆಂಬಲಿಸಲು ಅರ್ಹತೆ ಆಧಾರಿತ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭಿಸಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಿದೆ.
● ಮಹಿಳಾ ಪೊಲೀಸರ ಸಬಲೀಕರಣ: ಸಮುದಾಯದ ಸುರಕ್ಷತೆ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲು ಮಹಿಳಾ ಪೊಲೀಸ್ ಸಿಬ್ಬಂದಿಗೆ ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ ಗಳನ್ನು ವಿತರಿಸುವುದರ ಜೊತೆಗೆ ವಿಶೇಷ ಸುರಕ್ಷತಾ ತರಬೇತಿಯನ್ನು ನೀಡಲಿದೆ.

ಬೆಂಗಳೂರು, ಜುಲೈ 6, 2026: ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಆಂಧ್ರಪ್ರದೇಶದಲ್ಲಿ ಬರೋಬ್ಬರಿ 3,200 ಕೋಟಿ ರೂಪಾಯಿಗಳಿಗೂ ಅಧಿಕ ಬೃಹತ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ತಿರುಪತಿಯಲ್ಲಿ ಕಂಪನಿಯ ಎರಡನೇ ಜಾಗತಿಕ ಬಿಡಿಭಾಗಗಳ ಕೇಂದ್ರಕ್ಕೆ ಅದ್ಧೂರಿಯಾಗಿ ಭೂಮಿಪೂಜೆ ನೆರವೇರಿಸಲಾಯಿತು.

ಸುಮಾರು 750 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಜಾಗತಿಕ ಕೇಂದ್ರವು ಅತ್ಯಾಧುನಿಕ ಲಾಜಿಸ್ಟಿಕ್ಸ್ ತಂತ್ರಜ್ಞಾನವನ್ನು ಹೊಂದಿರಲಿದ್ದು, ಹೀರೋ ಮೋಟೋಕಾರ್ಪ್‌ ನ ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ ಮತ್ತು ಆಟೋಮೋಟಿವ್ ಹಾಗೂ ಇವಿ ಪರಿಸರ ವ್ಯವಸ್ಥೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಈ ಹೂಡಿಕೆಯ ಮೂಲಕ ತಿರುಪತಿಯನ್ನು ವಿಶ್ವದರ್ಜೆಯ ಇವಿ (ಎಲೆಕ್ಟ್ರಿಕ್ ವಾಹನ) ಮತ್ತು ಉತ್ಪಾದನಾ ಹಬ್ ಆಗಿ ಪರಿವರ್ತಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದು ಹೀರೋ ಮೋಟೋಕಾರ್ಪ್‌ನ ಜಾಗತಿಕ ಸರಬರಾಜು ಜಾಲವನ್ನು ಬಲಪಡಿಸುವುದಲ್ಲದೆ, ಭಾರತದ ಆಟೋಮೊಬೈಲ್ ರಂಗಕ್ಕೆ ಹೊಸ ಶಕ್ತಿ ತುಂಬಲಿದೆ.

ಈ ಸಂದರ್ಭದಲ್ಲಿ ಹಾಜರಿದ್ದು ಮಾತನಾಡಿದ ಆಂಧ್ರಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರು, ‘ಆಂಧ್ರಪ್ರದೇಶದ ಬೆಳವಣಿಗೆಯ ಪಯಣದಲ್ಲಿ ಹೀರೋ ಮೋಟೋಕಾರ್ಪ್ ಅತ್ಯಮೂಲ್ಯ ಪಾಲುದಾರನಾಗಿದೆ ಮತ್ತು ತಿರುಪತಿಯಲ್ಲಿ ಜಾಗತಿಕ ಬಿಡಿಭಾಗಗಳ ಕೇಂದ್ರವನ್ನು ಸ್ಥಾಪಿಸುವ ಅದರ ನಿರ್ಧಾರವು ರಾಜ್ಯದ ಪ್ರಗತಿಪರ ನೀತಿಗಳು, ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಹೂಡಿಕೆದಾರ ಸ್ನೇಹಿ ಪರಿಸರ ವ್ಯವಸ್ಥೆಗೆ ದೊರೆತ ದೊಡ್ಡ ಮನ್ನಣೆಯಾಗಿದೆ. ಇಷ್ಟು ವರ್ಷಗಳಲ್ಲಿ, ಹೀರೋ ಮೋಟೋಕಾರ್ಪ್‌ ನ ಉಪಸ್ಥಿತಿಯು ರಾಜ್ಯದಾದ್ಯಂತ ಹೆಚ್ಚಿನ ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಈ ಪಾಲುದಾರಿಕೆಯು ಇನ್ನಷ್ಟು ಗಟ್ಟಿಯಾಗುತ್ತಿರುವುದನ್ನು ನೋಡಲು ನಮಗೆ ಸಂತೋಷವಾಗಿದೆ’ ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, “ಈ ಹೊಸ ಹೂಡಿಕೆಯು ನಮ್ಮ ಯುವಜನರಿಗೆ ಹೊಸ ಅವಕಾಶಗಳನ್ನು ಒದಗಿಸಲಿದ್ದು, ಪ್ರಾದೇಶಿಕ ಆರ್ಥಿಕತೆಯನ್ನು ಬಲಪಡಿಸಲಿದೆ ಮತ್ತು ತಿರುಪತಿಯನ್ನು ಪ್ರಮುಖ ಜಾಗತಿಕ ಉತ್ಪಾದನಾ ಹಾಗೂ ಲಾಜಿಸ್ಟಿಕ್ಸ್ ಹಬ್ ಆಗಿ ಮತ್ತಷ್ಟು ಉನ್ನತ ಸ್ಥಾನಕ್ಕೇರಿಸಲಿದೆ. ಆಂಧ್ರಪ್ರದೇಶದ ಮೇಲಿನ ಹೀರೋ ಮೋಟೋಕಾರ್ಪ್‌ ನ ನಿರಂತರ ಬದ್ಧತೆಯನ್ನು ನಾವು ಶ್ಲಾಘಿಸುತ್ತೇವೆ. ಎಲ್ಲರಿಗೂ ಸುಸ್ಥಿರ ಸಮೃದ್ಧಿಯನ್ನು ತಂದುಕೊಡುವ, ಭವಿಷ್ಯದ ಸವಾಲುಗಳಿಗೆ ಸಿದ್ಧವಾದ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ” ಎಂದರು.

ಹೀರೋ ಮೋಟೋಕಾರ್ಪ್‌ ನ ಕಾರ್ಯಕಾರಿ ಅಧ್ಯಕ್ಷರಾದ ಡಾ. ಪವನ್ ಮುಂಜಾಲ್ ಅವರು ಮಾತನಾಡಿ, “ಹೀರೋ ಮೋಟೋಕಾರ್ಪ್‌ ನಲ್ಲಿ ನಾವು ಯಾವಾಗಲೂ ವ್ಯವಹಾರದ ಬೆಳವಣಿಗೆ ಮತ್ತು ದೇಶ ನಿರ್ಮಾಣ ಎರಡೂ ಜೊತೆಯಾಗಿಯೇ ಸಾಗುತ್ತವೆ ಎಂದು ಬಲವಾಗಿ ನಂಬಿದ್ದೇವೆ. ತಿರುಪತಿಯಲ್ಲಿ ನಮ್ಮ ಎರಡನೇ ಜಾಗತಿಕ ಬಿಡಿಭಾಗಗಳ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ನಮ್ಮ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಇದು ಭಾರತದ ಉಜ್ವಲ ಭವಿಷ್ಯದ ಮೇಲಿನ ನಮ್ಮ ಅಪಾರ ನಂಬಿಕೆಯನ್ನು ಮತ್ತು ಆಂಧ್ರಪ್ರದೇಶದ ಬೆಳವಣಿಗೆಯ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ತಿರುಪತಿಯನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧವಿರುವ ಉತ್ಪಾದನಾ ಮತ್ತು ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯ ಕೇಂದ್ರವನ್ನಾಗಿ ಪರಿವರ್ತಿಸುವ ಮೂಲಕ, ಈ ಹೂಡಿಕೆಯು ನಮ್ಮ ಜಾಗತಿಕ ಪೂರೈಕೆ ಸರಪಳಿಯನ್ನು ಹೆಚ್ಚಿಸಲಿದೆ, ವಿವಿಧ ಮಾರುಕಟ್ಟೆಗಳಲ್ಲಿ ನಮ್ಮ ವಿಸ್ತರಣೆಗೆ ಬೆಂಬಲ ನೀಡಲಿದೆ ಮತ್ತು ಮೇಡ್ ಇನ್ ಇಂಡಿಯಾ, ಭಾರತಕ್ಕಾಗಿ ಮತ್ತು ಜಗತ್ತಿಗಾಗಿ ಎಂಬ ನಮ್ಮ ಬದ್ಧತೆಯನ್ನು ಸಾರುತ್ತದೆ” ಎಂದು ಹೇಳಿದರು.

“ನನ್ನ ತಂದೆ, ನಮ್ಮ ಸಂಸ್ಥಾಪಕರು ಮತ್ತು ಗೌರವಾನ್ವಿತ ಚೇರ್ಮನ್ ಎಮೆರಿಟಸ್ ಆಗಿರುವ ಡಾ. ಬ್ರಿಜ್‌ ಮೋಹನ್ ಲಾಲ್ ಮುಂಜಾಲ್ ಅವರ ಜನ್ಮದಿನದಂದು ಈ ಕಾರ್ಯಕ್ರಮ ನಡೆಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಅವರು ದೀರ್ಘಕಾಲ ಉಳಿಯುವ ಸಂಸ್ಥೆಗಳನ್ನು ನಿರ್ಮಿಸುವಲ್ಲಿ ಮತ್ತು ಯಾವಾಗಲೂ ಭವಿಷ್ಯಕ್ಕಾಗಿ ಸಿದ್ಧರಾಗುವಲ್ಲಿ ನಂಬಿಕೆ ಹೊಂದಿದ್ದರು. ನನ್ನ ಪ್ರೀತಿಯ ತಂದೆ, ನಮ್ಮ ಸಂಸ್ಥಾಪಕರು ಹಾಗೂ ಗೌರವಾನ್ವಿತ ಚೇರ್ಮನ್ ಎಮೆರಿಟಸ್ ಡಾ. ಬ್ರಿಜ್‌ ಮೋಹನ್ ಲಾಲ್ ಮುಂಜಾಲ್ ಅವರ 103ನೇ ಜನ್ಮದಿನದಂದು ಈ ಸಾಧನೆ ಮಾಡಿರುವುದು ಹೆಚ್ಚಿನ ಅರ್ಥವನ್ನು ನೀಡುತ್ತದೆ. ನಿಜವಾದ ದೂದರ್ಶಿಗಳಾಗಿದ್ದ ಅವರು, ಶ್ರೇಷ್ಠ ಸಂಸ್ಥೆಗಳು ಕೇವಲ ಪ್ರಸ್ತುತ ಕಾಲದಲ್ಲಿ ನಡೆಯಲು ಮಾತ್ರ ನಿರ್ಮಾಣವಾಗುವುದಿಲ್ಲ, ಬದಲಿಗೆ ಭವಿಷ್ಯವನ್ನು ಮುನ್ನಡೆಸಲು ರೂಪಿಸಲ್ಪಡುತ್ತವೆ ಎಂಬ ನಂಬಿಕೆಯನ್ನು ಪ್ರತಿಪಾದಿಸಿದರು. ಈ ಕೇಂದ್ರವು ಅವರ ದೂರದೃಷ್ಟಿ, ಮೌಲ್ಯಗಳು ಮತ್ತು ಭಾರತದ ಸಾಮರ್ಥ್ಯದ ಮೇಲಿನ ಅವರ ಅಚಲ ನಂಬಿಕೆಗೆ ಸಲ್ಲಿಸುವ ವಿನಮ್ರ ಗೌರವವಾಗಿದೆ. ಈ ಹೊಸ ಕೇಂದ್ರವು ಅವರ ಉದ್ಯಮಶೀಲತೆ, ಉದ್ಧೇಶ ಮತ್ತು ರಾಷ್ಟ್ರಸೇವೆಯ ಪರಂಪರೆಯನ್ನು ಹೆಮ್ಮೆಯಿಂದ ಮುಂದುವರಿಸಿಕೊಂಡು ಹೋಗಲಿದೆ ಎಂಬ ಭರವಸೆ ನನಗಿದೆ” ಎಂದು ಅವರು ಹೇಳಿದರು.

ಭಾರತಕ್ಕಾಗಿ ನಿರ್ಮಾಣ, ಜಗತ್ತಿಗೆ ಪೂರೈಕೆ
ಮುಂಬರಲಿರುವ ಈ ಜಾಗತಿಕ ಬಿಡಿಭಾಗಗಳ ಕೇಂದ್ರವು ಹೀರೋ ಮೋಟೋಕಾರ್ಪ್‌ ನ ದೇಶೀಯ ಮತ್ತು ಅಂತರರಾಷ್ಟ್ರೀಯ ಬಿಡಿಭಾಗಗಳ ಕಾರ್ಯಾಚರಣೆಗೆ ಆಯಕಟ್ಟಿನ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ನಮ್ಮ ಎಲೆಕ್ಟ್ರಿಕ್ ವಾಹನಗಳ ಸಂಪೂರ್ಣ ಶ್ರೇಣಿಯನ್ನು ಸಂಪೂರ್ಣವಾಗಿ ತಿರುಪತಿ ಪ್ಲಾಂಟ್‌ ನಲ್ಲಿಯೇ ವಿನ್ಯಾಸಗೊಳಿಸಲಾಗಿದೆ, ಇಂಜಿನಿಯರಿಂಗ್ ಮಾಡಲಾಗಿದೆ ಮತ್ತು ಉತ್ಪಾದಿಸಲಾಗಿದೆ. ಈ ಹೂಡಿಕೆಯೊಂದಿಗೆ, ಈ ಪ್ಲಾಂಟ್‌ ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು ಭಾರಿ ಪ್ರಮಾಣದಲ್ಲಿ 1.2–1.5 ಮಿಲಿಯನ್ (12 ರಿಂದ 15 ಲಕ್ಷ) ಯುನಿಟ್‌ ಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ, ಇದು ಭವಿಷ್ಯದ ಸಾರಿಗೆ ವ್ಯವಸ್ಥೆಗಾಗಿ ಭಾರತದ ಪ್ರಮುಖ ಉತ್ಪಾದನಾ ಹಬ್‌ ಗಳಲ್ಲಿ ಒಂದಾಗಿ ತಿರುಪತಿಯ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.

ಉದ್ಯೋಗಾವಕಾಶಗಳ ಸೃಷ್ಟಿ
ಈ ವಿಸ್ತರಣಾ ಯೋಜನೆಯಿಂದಾಗಿ ಸುಮಾರು 4,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಈ ಉದ್ಯೋಗ ಸೃಷ್ಟಿಯು ರಾಷ್ಟ್ರೀಯ ದೃಷ್ಟಿಕೋನವಾದ ವಿಕಸಿತ ಭಾರತ 2047 ಮತ್ತು ಆಂಧ್ರಪ್ರದೇಶ ಸರ್ಕಾರದ ಸ್ವರ್ಣಾಂಧ್ರ ದೂದರ್ಶಿತ್ವ ಎರಡಕ್ಕೂ ಪೂರಕವಾಗಿದೆ. ಕೇವಲ ಉದ್ಯೋಗ ಒದಗಿಸುವುದಷ್ಟೇ ಅಲ್ಲದೆ, ಈ ಜಾಗತಿಕ ಬಿಡಿಭಾಗಗಳ ಕೇಂದ್ರವು ಪ್ರಾದೇಶಿಕವಾಗಿ ಸುಸ್ಥಿರ ಪ್ರಯೋಜನಗಳನ್ನು ನೀಡುವಲ್ಲಿ ಆರ್ಥಿಕ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ.

ಸಮುದಾಯಗಳ ಸಬಲೀಕರಣ
ಸುಸ್ಥಿರ ಬೆಳವಣಿಗೆಯ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಾ, ಹೀರೋ ಮೋಟೋಕಾರ್ಪ್ ಆಂಧ್ರಪ್ರದೇಶ ಸರ್ಕಾರದ ಸಹಭಾಗಿತ್ವದಲ್ಲಿ ಎರಡು ಪರಿವರ್ತನಾತ್ಮಕ ಸಮುದಾಯ ಯೋಜನೆಗಳನ್ನು ಪ್ರಾರಂಭಿಸಿದೆ. ಡಾ. ಬ್ರಿಜ್‌ ಮೋಹನ್ ಲಾಲ್ ಮುಂಜಾಲ್ ಹೀರೋಸ್ ಆಫ್ ಟುಮಾರೋ ಸ್ಕಾಲರ್‌ ಶಿಪ್ ಕಾರ್ಯಕ್ರಮವು 28 ಜಿಲ್ಲೆಗಳ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳನ್ನು ಸಬಲೀಕರಿಸಲಿದೆ. ಈ ಯೋಜನೆಯು ರಾಜ್ಯದ ಐಐಐಟಿಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೋಧನಾ ಶುಲ್ಕದ ನೆರವನ್ನು ನೀಡಲಿದ್ದು, ಆ ಮೂಲಕ ಮುಂದಿನ ಪೀಳಿಗೆಯ ತಂತ್ರಜ್ಞಾನ ನಾಯಕರನ್ನು ಬೆಳೆಸಲಿದೆ. ಇದಲ್ಲದೆ, ಸ್ಥಳೀಯ ಸಮುದಾಯದ ಕಲ್ಯಾಣಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಕಂಪನಿಯು ತಿರುಪತಿ ಜಿಲ್ಲೆಯಾದ್ಯಂತ ಮಹಿಳಾ ಪೊಲೀಸ್ ಸಿಬ್ಬಂದಿಗೆ ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ ಗಳನ್ನು ವಿತರಿಸಲಿದೆ ಮತ್ತು ವಿಶೇಷ ರಸ್ತೆ ಸುರಕ್ಷತಾ ತರಬೇತಿಯನ್ನು ನೀಡಲಿದೆ. ಈ ಮೂಲಕ ಸುಸ್ಥಿರ ಸಾರಿಗೆ ವ್ಯವಸ್ಥೆ ಮೂಲಕ ಅವರ ಸಬಲೀಕರಣಕ್ಕೆ ಉತ್ತೇಜನ ನೀಡಲಿದೆ.

Previous Post

ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್, ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ (ಪ್ರೈ) ಲಿಮಿಟೆಡ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

Next Post

ಕೋಟಕ್ ಮಹೀಂದ್ರಾ ಬ್ಯಾಂಕ್‌ ನಿಂದ ಹೌಸ್ಲಾ 2.0 ಅಭಿಯಾನಕ್ಕೆ ಚಾಲನೆ; ಸಾಹಸೀ ಕನಸುಗಳಿಗೆ ಆರ್ಥಿಕ ಬಲ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕೋಟಕ್ ಮಹೀಂದ್ರಾ ಬ್ಯಾಂಕ್‌ ನಿಂದ ಹೌಸ್ಲಾ 2.0 ಅಭಿಯಾನಕ್ಕೆ ಚಾಲನೆ; ಸಾಹಸೀ ಕನಸುಗಳಿಗೆ ಆರ್ಥಿಕ ಬಲ

ಕೋಟಕ್ ಮಹೀಂದ್ರಾ ಬ್ಯಾಂಕ್‌ ನಿಂದ ಹೌಸ್ಲಾ 2.0 ಅಭಿಯಾನಕ್ಕೆ ಚಾಲನೆ; ಸಾಹಸೀ ಕನಸುಗಳಿಗೆ ಆರ್ಥಿಕ ಬಲ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
Lost in Translation? Not Anymore: How Netflix Is Carrying Indian Stories Across Borders

Lost in Translation? Not Anymore: How Netflix Is Carrying Indian Stories Across Borders

07/07/2026
ಫಾರ್ಮುಲಾ 1 ನ್ಯೂಟ್ರಿಷನಲ್ ಶೇಕ್ ಸರಣಿಯಲ್ಲಿ ಡೇಟ್ಸ್ ಕ್ಯಾರಮೆಲ್ ಫ್ಲೇವರ್ ಬಿಡುಗಡೆ ಮಾಡಿದ ಹರ್ಬಲೈಫ್ ಇಂಡಿಯಾ

ಫಾರ್ಮುಲಾ 1 ನ್ಯೂಟ್ರಿಷನಲ್ ಶೇಕ್ ಸರಣಿಯಲ್ಲಿ ಡೇಟ್ಸ್ ಕ್ಯಾರಮೆಲ್ ಫ್ಲೇವರ್ ಬಿಡುಗಡೆ ಮಾಡಿದ ಹರ್ಬಲೈಫ್ ಇಂಡಿಯಾ

07/07/2026
ಮಾತಿಬೆಟ್ಟಿನ ಹಿರಿಯ ಕೃಷಿಕ ಹಾಗೂ ವ್ಯಾಪಾರಿ ಶಿಶುಪಾಲ್ ಜೈನ್ ನಿಧನ

ಮಾತಿಬೆಟ್ಟಿನ ಹಿರಿಯ ಕೃಷಿಕ ಹಾಗೂ ವ್ಯಾಪಾರಿ ಶಿಶುಪಾಲ್ ಜೈನ್ ನಿಧನ

07/07/2026
ಕೌಶಲ್ಯದಿಂದ ಬದುಕು ಹಸನು : ಶ್ರೀ. ಶಿವರಾಮ್ ಎಂ ಬಾಬು, ಐ ಎಫ್ ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯ ಜೀವಿ ವಿಭಾಗ

ಕೌಶಲ್ಯದಿಂದ ಬದುಕು ಹಸನು : ಶ್ರೀ. ಶಿವರಾಮ್ ಎಂ ಬಾಬು, ಐ ಎಫ್ ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯ ಜೀವಿ ವಿಭಾಗ

07/07/2026

Recent News

Lost in Translation? Not Anymore: How Netflix Is Carrying Indian Stories Across Borders

Lost in Translation? Not Anymore: How Netflix Is Carrying Indian Stories Across Borders

07/07/2026
ಫಾರ್ಮುಲಾ 1 ನ್ಯೂಟ್ರಿಷನಲ್ ಶೇಕ್ ಸರಣಿಯಲ್ಲಿ ಡೇಟ್ಸ್ ಕ್ಯಾರಮೆಲ್ ಫ್ಲೇವರ್ ಬಿಡುಗಡೆ ಮಾಡಿದ ಹರ್ಬಲೈಫ್ ಇಂಡಿಯಾ

ಫಾರ್ಮುಲಾ 1 ನ್ಯೂಟ್ರಿಷನಲ್ ಶೇಕ್ ಸರಣಿಯಲ್ಲಿ ಡೇಟ್ಸ್ ಕ್ಯಾರಮೆಲ್ ಫ್ಲೇವರ್ ಬಿಡುಗಡೆ ಮಾಡಿದ ಹರ್ಬಲೈಫ್ ಇಂಡಿಯಾ

07/07/2026
ಮಾತಿಬೆಟ್ಟಿನ ಹಿರಿಯ ಕೃಷಿಕ ಹಾಗೂ ವ್ಯಾಪಾರಿ ಶಿಶುಪಾಲ್ ಜೈನ್ ನಿಧನ

ಮಾತಿಬೆಟ್ಟಿನ ಹಿರಿಯ ಕೃಷಿಕ ಹಾಗೂ ವ್ಯಾಪಾರಿ ಶಿಶುಪಾಲ್ ಜೈನ್ ನಿಧನ

07/07/2026
ಕೌಶಲ್ಯದಿಂದ ಬದುಕು ಹಸನು : ಶ್ರೀ. ಶಿವರಾಮ್ ಎಂ ಬಾಬು, ಐ ಎಫ್ ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯ ಜೀವಿ ವಿಭಾಗ

ಕೌಶಲ್ಯದಿಂದ ಬದುಕು ಹಸನು : ಶ್ರೀ. ಶಿವರಾಮ್ ಎಂ ಬಾಬು, ಐ ಎಫ್ ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯ ಜೀವಿ ವಿಭಾಗ

07/07/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved