ಶಿರ್ವ, ಫೆ. 13: ಕಾಪು ಕ್ಷೇತ್ರದ ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ₹40 ಲಕ್ಷ ಅನುದಾನ ಮಂಜೂರಾಗಿ ಭೂಮಿಪೂಜೆ ನೆರವೇರಿಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ಇನ್ನಂಜೆ ಗ್ರಾಮದ ನಿರಂಜನ ಶೆಟ್ಟಿ ಮನೆ ಬಳಿ ರಸ್ತೆ ಅಭಿವೃದ್ಧಿ, ಪಾಂಗಾಳ ಗ್ರಾಮದ ಸದಾಡಿ ಗುರುರಾಜ್ ಆಚಾರ್ಯ ಮನೆ ಬಳಿಯಿಂದ ಮಲೆ ಜುಮಾದಿ ಸಾನದವರೆಗೆ ರಸ್ತೆ ಅಭಿವೃದ್ಧಿ, ಇನ್ನಂಜೆ ಗ್ರಾಮದ ಗೋಳಿಕಟ್ಟೆ ವಿಠಲ್ ಕುಮಾರ್ ಮನೆ ಬಳಿಯ ರಸ್ತೆ ಅಭಿವೃದ್ಧಿ, ಶೀಲಾಪುರ ಮೋಹನ್ ಆಚಾರ್ಯ ಮನೆ ಬಳಿಯ ರಸ್ತೆ ಅಭಿವೃದ್ಧಿಗೆ ತಲಾ ₹10 ಲಕ್ಷ ಸೇರಿದಂತೆ ಒಟ್ಟು ₹40 ಲಕ್ಷದಲ್ಲಿ ಕಾಮಗಾರಿ ನಡೆಯಲಿದೆ ಎಂದು ತಿಳಿಸಲಾಯಿತು.
ಇನ್ನಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಉಪಾಧ್ಯಕ್ಷೆ ಸುರೇಖಾ ಶೆಟ್ಟಿ, ಸದಸ್ಯರಾದ ದಿವೇಶ್ ಶೆಟ್ಟಿ, ನಿತೇಶ್ ಸಾಲಿಯಾನ್, ಪುಷ್ಪಾ, ಸವಿತಾ ಶೆಟ್ಟಿ, ಮಲ್ಲಿಕಾ ಆಚಾರ್ಯ, ಸುನೀತಾ ಕುಲಾಲ್, ಅನಿತಾ ಮಥಾಯಸ್, ಜಯಶ್ರೀ, ರಾಜೇಶ್ ಆಚಾರ್ಯ, ಶಕ್ತಿ ಕೇಂದ್ರದ ಪ್ರವೀಣ್ ಶೆಟ್ಟಿ ಪಾಂಗಾಳ, ಸ್ಥಳೀಯರಾದ ಶೈಲೇಶ್ ಶೆಟ್ಟಿ ಪಾಂಗಾಳ, ನಾಗೇಶ್ ಭಂಡಾರಿ, ರಾಜೇಶ್ ಕುಲಾಲ್, ಪ್ರಕಾಶ್ ಆಚಾರ್ಯ, ಮಧುಸೂದನ್ ಆಚಾರ್ಯ, ನಿರಂಜನ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಇದ್ದರು.






