ಮೈಸೂರು:ಅಕ್ಟೋಬರ್ 04 : ಉಡುಪಿ ಜಿಲ್ಲೆಯ ಪಡುಬೈಲೂರಿನ ‘ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ’ವು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಮೊದಲ ಬಹುಮಾನ ಪಡೆದಿದೆ. ನಾಗರಾಜ ಐತಾಳ್ ನೇತೃತ್ವದ ಈ ತಂಡ ₹ 15ಸಾವಿರ ಗಳಿಸಿದೆ.
ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿಯ ಉಪವಿಶೇಷಾಧಿಕಾರಿ ಸೀಮಾ ಲಾಟ್ಕರ್ ಬಹುಮಾನಿತ ಕಲಾತಂಡಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ದ್ವಿತೀಯ ಬಹುಮಾನವನ್ನು ‘ಗೊರವರ ಕುಣಿತ’ಕ್ಕೆ ಸಿಕ್ಕಿದ್ದು, ಚಾಮರಾಜನಗರ ಜಿಲ್ಲೆಯ ‘ಭಕ್ತ ಕನಕದಾಸರ ಗೊರವರ ಕುಣಿತ ಕಲಾಸಂಘ’ದ ಆರ್.ಎಂ.ಶಿವಮಲ್ಲು, ಮೈಸೂರಿನ ಕುವೆಂಪುನಗರದ ‘ಸರಪಣಿ ಮೈಲಾರ ಲಿಂಗೇಶ್ವರ ಗೊರವರ ತಂಡ’ದ ಚನ್ನಮಲ್ಲೇಗೌಡ ಹಂಚಿಕೊಂಡಿದ್ದಾರೆ. ತಲಾ ₹ 5ಸಾವಿರ ನಗದು ಬಹುಮಾನಕ್ಕೆ ಪಾತ್ರವಾಗಿದ್ದಾರೆ.








