ಉಡುಪಿ: ಆಗಸ್ಟ್ 13: ಉಡುಪಿ ಜಿಲ್ಲೆಯ ಪುತ್ತೂರು ಸುಬ್ರಮಣ್ಯನಗರದಲ್ಲಿ ತಲವಾರು ಮತ್ತು ಚಾಕುವಿನಿಂದ ಸ್ನೇಹಿತನನ್ನು ಆಗಸ್ಟ್ 12ರಂದು ರಾತ್ರಿ ಹತ್ಯೆ ಮಾಡಿ ಬಳಿಕ ಕೊಲೆ ಮಾಡಿದ ಮೂವರು ಅರೋಪಿಗಳು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಶರಣಾದ ಘಟನೆ ನಡೆದಿದೆ
ಘಟನೆ ವಿವರ
ಪುತ್ತೂರು ಸುಬ್ರಮಣ್ಯನಗರದಲ್ಲಿನ ನಿವಾಸಿ ವಿನಯ್ ದೇವಾಡಿಗನ ಮನೆಗೆ ನುಗ್ಗಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ ಮೂವರು ಅರೋಪಿಗಳು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.
ಕೊಕ್ಕರ್ಣೆ ಗಾಂಧಿ ನಗರ ನಿವಾಸಿ ಅಜಿತ್ (28) ಅಕ್ಷೇಂದ್ರ(34) ಬೆನಗಲ್ ನಿವಾಸಿ ಪ್ರದೀಪ್ ಅಚಾರ್ಯ ವಿನಯ್ ದೇವಾಡಿಗನನ್ನು ಬರ್ಬರವಾಗಿ ಕೊಂದಿರುವ ಆರೋಪಿಗಳಾಗಿದ್ದಾರೆ.
ವಿನಯ್ ಪೈಂಟಿಗ್ ಕೆಲಸ ಮಾಡುತ್ತಿದ್ದು,ಈ ಮೂವರು ವಿನಯ್ ದೇವಾಡಿಗನ ಅತ್ಮೀಯ ಸ್ನೇಹಿತರಾಗಿದ್ದರು ರಾತ್ರಿ ಮನೆಗೆ ಬಂದು ಬಗಿಲು ಬಡಿದು ವಿನಯ್ ನನ್ನು ವಿಚಾರಿಸಿದಾಗ ಬಾಗಿಲು ತೆರೆದಿದ್ದಾರೆ.
ಮನೆಗೆ ನುಗ್ಗಿ ಮನೆಯೆಲ್ಲ ಹುಡುಕಾಡಿದ್ದಾರೆ.ಶಬ್ದದಿಂದ ಎಚ್ಚೆತ್ತ ವಿನಯ್ ನನ್ನು ಕಂಡ ಅರೋಪಿಗಳು ಮೊಬೈಲ್ ಗಾಗಿ ತಡಕಾಡಿದ್ದಾರೆ , ಬಳಿಕ ಅಜಿತ್ ವಿನಯ್ ನನ್ನು ತಪ್ಪಿಸಿಕೊಳ್ಳದಂತೆ ಹಿಡಿದಿಟ್ಟಿದ್ದು,ಇನ್ನಿಬ್ಬರು ತಲವಾರು ಮತ್ತು ಚಾಕುವಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಈ ಮೂವರು ಬ್ರಹ್ಮಾವರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಘಟನೆಗೆ ಮೂಲ ಕಾರಣ ಒಂದು ವಾಟ್ಸ ಅಪ್ ಅಡಿಯೋ ಮೆಸೇಜ್ ಎನ್ನಲಾಗಿದೆ.ಅರೋಪಿ ಅಕ್ಷೇಂದ್ರನಿಗೆ ಜೀವನ್ ಎಂಬಾತ ಬೈದಿರುವ ಅಡಿಯೋ ಮೆಸೇಜನ್ನು ವಿನಯ್ ಫಾರ್ವರ್ಡ್ ಮಾಡಿದ್ದ ಎನ್ನುವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗಿದೆ








