ಉಡುಪಿ: ಜೂನ್ 24 : ಉಡುಪಿ ನಗರಸಭೆಯ ಪೌರಾಯುಕ್ತರಾಗಿ ಮಹಾಂತೇಶ ಹಂಗರಗಿ ಜೂನ್ 23ರಂದು ಅಧಿಕಾರ ವಹಿಸಿಕೊಂಡರು.
ಮಹಾಂತೇಶ ಬಿಎಸ್ಸಿ (ಕೃಷಿ) ಪದವಿಧರರು. 2017ನೇ ಸಾಲಿನ ಕೆ.ಎ.ಎಸ್ ಬ್ಯಾಚ್ ಅಧಿಕಾರಿ.ಇವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದವರು
ಹಾರೂಗೇರಿ ಪುರಸಭೆ, ವಿಜಯಪುರ ಮಹಾನಗರ ಪಾಲಿಕೆ ಹಾಗೂ ಇಂಡಿ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡಿದ್ದು ಇದೀಗ ಉಡುಪಿ ನಗರಸಭೆಯ ಪೌರಾಯುಕ್ತರಾಗಿ ಸೋಮವಾರ (ಜೂನ್ 23) ಅಧಿಕಾರ ವಹಿಸಿಕೊಂಡಿದ್ದಾರೆ